'ನಾನು ಸದಾ ಪ್ರಧಾನಿ ಮೋದಿ ಬೆನ್ನಿಗೆ ನಿಂತಿರುತ್ತೇನೆ, ಅವರ ನಿಲುವಿಗೆ ಬದ್ಧನಾಗಿರುತ್ತೇನೆ', ಎಂದು ತಮ್ಮ ಹೇಳಿಕೆಗಳಿಂದ ಸ್ವಪಕ್ಷವನ್ನೇ ಇಕ್ಕಟ್ಟಿಗೆ ಸಿಕ್ಕಿ ಹಾಕಿಸುತ್ತಿರುವ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಸ್ವಾಮಿ ಮಾಡಿರುವ ಆರೋಪಗಳಿಗೆ ನನ್ನ ಸಹಮತವಿಲ್ಲ.ಪ್ರಚಾರಕ್ಕಾಗಿ ಒಬ್ಬರ ಮೇಲೆ ಆರೋಪ ಹೊರಿಸುವುದು ಸರಿಯಲ್ಲ, ವ್ಯವಸ್ಥೆಗಿಂತಲೂ ದೊಡ್ಡವನು ಎಂದು ಯಾರಾದರೂ ತಿಳಿದುಕೊಂಡಿದ್ದರೆ, ಇದು ಅವರ ತಪ್ಪು ತಿಳುವಳಿಕೆ. ರಾಜನ್ ಒಬ್ಬ ದೇಶಭಕ್ತ. ಸುಬ್ರಮಣಿಯನ್ ಸ್ವಾಮಿ ಅವರ ಪ್ರಚಾರದ ಹುಚ್ಚನ್ನು ಬಿಜೆಪಿ ಅನುಮೋದಿಸುವುದಿಲ್ಲ ಎಂದು ಮೋದಿ ಕಿಡಿಕಾರಿದ್ದರು.