ದೀನ್ ದಯಾಳ್ ಉಪಾಧ್ಯಾಯ ಸಾಧನೆ ಪ್ರಶ್ನಿಸಿದ ಜಿಲ್ಲಾಧಿಕಾರಿ ಎತ್ತಂಗಡಿ

ಭಾನುವಾರ, 9 ಅಕ್ಟೋಬರ್ 2016 (12:03 IST)
ಭಾರತೀಯ ಜನ ಸಂಘ ಸಂಸ್ಥಾಪಕ ದೀನ್ ದಯಾಳ್ ಉಪಾಧ್ಯಾಯ ಸಾಧನೆ ಏನು? ಎಂದು ಫೇಸ್‌ಬುಕ್‌ನಲ್ಲಿ ಪ್ರಶ್ನಿಸಿದ ಜಿಲ್ಲಾಧಿಕಾರಿ ಶಿವ್ ಅನಂತ್ ತಯಾಲ್ ಅವರನ್ನು ಚತ್ತೀಸ್‌ಗಡ್ ಸರಕಾರ ಎತ್ತಂಗಡಿ ಮಾಡಿದ ಘಟನೆ ವರದಿಯಾಗಿದೆ.
ಜಿಲ್ಲಾಧಿಕಾರಿ ಶಿವ್ ಅನಂತ್ ತಯಾಲ್ ಸಾಮಾಜಿಕ ಅಂತರ್ಜಾಲ ತಾಣವಾದ ಫೇಸ್‌ಬುಕ್‌ನಲ್ಲಿ ದೀನ್ ದಯಾಳ್ ಉಪಾಧ್ಯಾಯ ಯಾವುದೇ ಸಾಧನೆ ಮಾಡಿರುವುದು ಕಂಡು ಬಂದಿಲ್ಲ. ಒಂದೇ ಒಂದು ಚುನಾವಣೆಯಲ್ಲಿ ಭಾರಿ ಬಹುಮತಗಳ ಅಂತರದಿಂದ ಗೆದ್ದಿರುವ ಉದಾಹರಣೆಗಳಿಲ್ಲ ಎನ್ನುವ ಸಂದೇಶವನ್ನು ಪೋಸ್ಟ್ ಮಾಡಿದ್ದರಿಂದ ಬಿಜೆಪಿ ಸರಕಾರ ಆಕ್ರೋಶಗೊಂಡಿದೆ.
 
ಅನಂತ್ ತಯಾಳ್ ಅವರ ಫೇಸ್‌ಬುಕ್ ಸಂದೇಶ ಹೊರಬೀಳುತ್ತಿದ್ದಂತೆ ಸರಕಾರ ಅವರನ್ನು ಬೇರೆ ಜಿಲ್ಲೆಗೆ ವರ್ಗ ಮಾಡಿ ಕೋಪವನ್ನು ತೀರಿಸಿಕೊಂಡಿದೆ.
 
ಕೂಡಲೇ ಜಿಲ್ಲಾಧಿಕಾರಿ ಶಿವ ಅನಂತ್ ತಯಾಲ್, ಫೇಸ್‌ಬುಕ್ ಸಂದೇಶವನ್ನು ಅಳಿಸಿಹಾಕಿದ್ದಲ್ಲದೇ ಖೇದ ಕೂಡಾ ವ್ಯಕ್ತಪಡಿಸಿದ್ದರು. ದೀನ್ ದಯಾಳ್ ಉಪಾಧ್ಯಾಯ ಅವರನ್ನು ಹೀಯಾಳಿಸುವ ಉದ್ದೇಶವಿರಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ