ಪ್ರೀತಿಯ ಅಮ್ಮನ ಅಗಲಿಕೆಯಿಂದ ನೊಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾವು ಸಂಭವಿಸಿದ್ದು, ಜಿಲ್ಲಾವಾರು ಕೃಷ್ಣಗಿರಿ(8) ಯಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸಿವೆ. ಸೇಲಂ 7 , ತಿರುವಳ್ಳೂರು-5 ಕಾಂಚೀಪುರಂ- 4 ಧರ್ಮಪುರಿ- 4 ಜನರು ಮೃತಪಟ್ಟ ವರದಿಯಾಗಿವೆ.
ಜಯಾ ಅವರಿಗೆ ಹೃದಯಾಘಾತವಾದ ದಿನವೇ ಇಬ್ಬರು ಅಭಿಮಾನಿಗಳು ಮೃತಪಟ್ಟಿದ್ದರು.
ಕಳೆದ ಸೆಪ್ಟೆಂಬರ್ 23ರಂದು ಜ್ವರ ಮತ್ತು ನಿರ್ಜಲೀಕರಣದಿಂದ ಚೆನ್ನೈನ ಅಪೋಲೋ ಆಸ್ಪತ್ರೆ ಸೇರಿದ್ದ ತಮಿಳುಮಾಡು ಸಿಎಂ ಜಯಲಲಿತಾ ಅವರಿಗೆ ಭಾನುವಾರ ಹೃದಯಾಘಾತವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ 11. 30ಕ್ಕೆ ಅವರು ಮರಣವನ್ನಪ್ಪಿದ್ದರು.