ಹಾರಲು ಪರ್ಮಿಷನ್ ಬೇಕಾಗಿಲ್ಲ ಎಂದ ಶಶಿ ತರೂರ್: ಮುಂದಿನ ಸಲ ಬಿಜೆಪಿ ಪಕ್ಕಾ ಎಂದ ನೆಟ್ಟಿಗರು

Krishnaveni K

ಗುರುವಾರ, 26 ಜೂನ್ 2025 (20:52 IST)
Photo Credit: X
ನವದೆಹಲಿ: ತಿರುವನಂತಪುರಂನ ಕಾಂಗ್ರೆಸ್ ಸಂಸದ ಶಶಿ ತರೂರ್ ಹಾರಲು ಯಾರ ಅಪ್ಪಣೆಯೂ ಬೇಕಾಗಿಲ್ಲ ಎಂದು ಗೂಡಾರ್ಥವಿರುವ ಟ್ವೀಟ್ ಮಾಡಿದ್ದರು. ಇದಕ್ಕೆ ಕಾಮೆಂಟ್ ಮಾಡಿರುವ ನೆಟ್ಟಿಗರು ಹಾಗಿದ್ದರೆ ಮುಂದಿನ ಬಾರಿ ಬಿಜೆಪಿ ಪಕ್ಕಾ ಎಂದಿದ್ದಾರೆ.

ಶಶಿ ತರೂರ್ ಕಾಂಗ್ರೆಸ್ ಸಂಸದ. ಆದರೆ ಸದ್ಯಕ್ಕೆ  ಮೋದಿ ಜೊತೆ ನಿಕಟವಾಗಿರುವ ಶಶಿ ತರೂರ್ ಮೇಲೆ ಕಾಂಗ್ರೆಸ್ ಹೈಕಮಾಂಡ್ ಮುನಿಸಿಕೊಂಡಿದೆ. ನಿನ್ನೆ ಮಲ್ಲಿಕಾರ್ಜುನ ಖರ್ಗೆ ಇದೇ ಕಾರಣಕ್ಕೆ ಟಾಂಗ್ ಕೊಟ್ಟಿದ್ದರು. ಇದೀಗ ತರೂರ್ ಹಾರಲು ಪರ್ಮಿಷನ್ ಬೇಡ ಎಂದಿದ್ದು ಅದೇ ಕಾರಣಕ್ಕೆ ಎನ್ನಲಾಗುತ್ತಿದೆ.

ಇದಕ್ಕೀಗ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಹಾಗಿದ್ದರೆ ಮಿಸ್ಟರ್ ತರೂರ್ ಮುಂದಿನ ಸಲ ಬಿಜೆಪಿಯಿಂದ ಸ್ಪರ್ಧಿಸುವುದು ಪಕ್ಕಾ ಎಂದಿದ್ದಾರೆ. ಮತ್ತೆ ಕೆಲವರು ಹಾಗಿದ್ದರೆ ಈಗಾಗಲೇ ಆರ್ ಎಸ್ಎಸ್ ನತ್ತ ಹಾರಿ ಆಗಿದೆ ಬಿಡಿ ಎಂದು ಕಾಲೆಳೆದಿದ್ದಾರೆ.

ಇನ್ನು ಬಿಜೆಪಿ ಸಮರ್ಥಕರಂತೂ ಶಶಿ ತರೂರ್ ತಪ್ಪಾದ ಜಾಗದಲ್ಲಿದ್ದೀರಿ. ಬನ್ನಿ ಬಿಜೆಪಿಗೆ ಎಂದು ಆಹ್ವಾನವಿತ್ತಿದ್ದಾರೆ. ತರೂರ್ ಬಿಜೆಪಿ ಸೇರುತ್ತಾರೋ ಬಿಡುತ್ತಾರೋ ಆದರೆ ಕಾಂಗ್ರೆಸ್ ಜೊತೆ ಮುನಿಸಿಕೊಂಡಿರುವ ಅವರು ಇತ್ತೀಚೆಗೆ ಮೋದಿಗೆ ಹತ್ತಿರವಾಗುತ್ತಿರುವುದು ನೋಡಿದರೆ ಇದು ನಿಜವಾದರೂ ಆಗಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ