ಜಯಲಲಿತಾ ನಿಧನ ಸುದ್ದಿ: ನಿಜವೋ ಸುಳ್ಳೋ.. ಆಸ್ಪತ್ರೆ ಎದುರು ಹೈಡ್ರಾಮಾ

ಸೋಮವಾರ, 5 ಡಿಸೆಂಬರ್ 2016 (18:11 IST)
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿಧನ ಸುದ್ದಿ ನಿಜವೋ ವದಂತಿಯೋ.. ಆಸ್ಪತ್ರೆ ಎದುರು ಹೈಡ್ರಾಮಾ ನಡೆಯುತ್ತಿದ್ದು, ಸಾವಿನ ಸುದ್ದಿ ಬಗ್ಗೆ ಗೊಂದಲ ಮೂಡಿದೆ.

ಮೊದಲು ಜಯಲಲಿತಾ ಮೃತಪಟ್ಟಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿತ್ತು ಎಂದು ತಮಿಳುನಾಡಿನ ಸುದ್ದಿ ವಾಹಿನಿಗಳು ಸುದ್ದಿ ಮಾಡಿತ್ತು. ಅಲ್ಲದೆ ಎಐಡಿಎಂಕೆ ಪಕ್ಷದ ಕಚೇರಿ ಎದುರು ಬಾವುಟವನ್ನು ದುಃಖ ಸೂಚಕವಾಗಿ ಅರ್ಧ ಹಾರಿಸಲಾಗಿತ್ತು. ಇದರಿಂದಾಗಿ ಜಯಲಲಿತಾ ನಿಧನರಾಗಿದ್ದಾರೆಂದು ಎಲ್ಲರೂ ನಂಬಿದ್ದರು.

ಆದರೆ ಸುದ್ದಿ ಹಬ್ಬುತ್ತಿದ್ದಂತೆ ಅಪೋಲೋ ಆಸ್ಪತ್ರೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಜಯಲಲಿತಾಗೆ ಚಿಕಿತ್ಸೆ ಮುಂದುವರಿಸಿದ್ದೇವೆ. ಕೃತಕ ಉಸಿರಾಟದ ಸಾಧನ ಮೂಲಕ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಹೀಗಾಗಿ ಸಾವಿನ ಬಗ್ಗೆ ಹೈಡ್ರಾಮಾ ನಡೆಯುತ್ತಿದ್ದು, ಯಾವುದು ನಿಜ, ಯಾವುದು ಸುಳ್ಳು ಎಂದು ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲದಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ