ಬಿಹಾರದಲ್ಲಿ ಮತ್ತೆ ಪತ್ರಕರ್ತನ ಹತ್ಯೆ

ಬುಧವಾರ, 4 ಜನವರಿ 2017 (10:48 IST)
ಬಿಹಾರದಲ್ಲಿ ಪತ್ರಕರ್ತರಿಗೆ ರಕ್ಷಣೆ ಇಲ್ಲವೆಂದು ಮತ್ತೆ ಸಾಬೀತಾಗಿದೆ. ದುಷ್ಕರ್ಮಿಗಳ ಗುಂಪೊಂದು ಪತ್ರಕರ್ತನನ್ನು ಗುಂಡಿಟ್ಟು ಕೊಂದಿದ್ದು ಸಂಪೂರ್ಣ ರಾಜ್ಯವೇ ಬೆಚ್ಚಿ ಬಿದ್ದಿದೆ. 
ಸಮಷ್ಟಿಪುರ ಜಿಲ್ಲೆಯ ಸಲ್ಖಾನಿ ಗ್ರಾಮದಲ್ಲಿ ಈ ಹೇಯ ಕೃತ್ಯ ನಡೆದಿದ್ದು, 5-6 ಜನರುಳ್ಳ ಅಪರಿಚಿತ ಗುಂಪೊಂದು ಪತ್ರಕರ್ತ ಬ್ರಜ್ ಕುಮಾರ್ ಸಿಂಗ್ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎಸ್. ಪಿ ನವಾಲ್ ಕಿಶೋರ್ ಪ್ರಸಾದ್ ಸಿಂಗ್ ಮಾಹಿತಿ ನೀಡಿದ್ದಾರೆ. 
 
ಮೃತ ಸಿಂಗ್ ಹಿಂದಿ ಪತ್ರಿಕೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಇಟ್ಟಂಗಿ ಉದ್ಯಮವನ್ನು ಸಹ ನಡೆಸುತ್ತಿದ್ದರು. ಘಟನೆಗೆ ಹಳೆ ವೈಷಮ್ಯವೇ ಕಾರಣ ಎಂದು ಪೊಲೀಸರು ಅನುಮಾನ ವ್ಯಕ್ತ ಪಡಿಸಿದ್ದಾರೆ. 
 
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಧರ್ಮೇಂದ್ರ ಸಿಂಗ್, ಮೇ ನಲ್ಲಿ ರಾಜ್ ಡಿಯೋ ರಂಜನ್ ಎಂಬ ಪತ್ರಕರ್ತರನ್ನು ಹತ್ಯೆಗೈಯ್ಯಲಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ