ಪಬ್ಲಿಸಿಟಿಗಾಗಿ ಕಮಲ್ ಹಾಸನ್ ಹೀಗೆ ಮಾಡಿದರಂತೆ!

ಭಾನುವಾರ, 5 ನವೆಂಬರ್ 2017 (09:11 IST)
ಚೆನ್ನೈ: ಹೊಸ ಪಕ್ಷ ಸ್ಥಾಪಿಸುವ ಹೊಸ್ತಿಲಲ್ಲಿ ಪಬ್ಲಿಸಿಟಿಗಾಗಿ ನಟ ಕಮಲ್ ಹಾಸನ್ ಹಿಂದೂ ಭಯೋತ್ಪಾದನೆ ಎಂಬ ವಿಷಯವನ್ನು ಕೆದಕಿದರು ಎಂದು ಹಿರಿಯ ಪತ್ರಕರ್ತರೊಬ್ಬರು ಟೀಕಿಸಿದ್ದಾರೆ.

 
ಪತ್ರಿಕೆಯೊಂದರಲ್ಲಿ ಕಮಲ್ ಹಾಸನ್ ಬಲಪಂಥೀಯರಲ್ಲೂ ಭಯೋತ್ಪಾದಕರಿದ್ದಾರೆ ಎಂದು ಹೇಳಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕಮಲ್ ಈ ಹೇಳಿಕೆ ಪಬ್ಲಿಸಿಟಿ ಸ್ಟಂಟ್ ಎಂದು ಹಿರಿಯ ಪತ್ರಕರ್ತ ಎಸ್. ವೆಂಕಟ್ರಮಣ್ ಆರೋಪಿಸಿದ್ದಾರೆ.

ಹಿಂದೂ ಭಯೋತ್ಪಾದಕರು ಎನ್ನುವ ಮೂಲಕ ಕಮಲ್ ಕೋಟ್ಯಾಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ತಮ್ಮ ಹುಟ್ಟುಹಬ್ಬಕ್ಕೆ ಮೊದಲು ಇದೆಲ್ಲಾ ನಟನ ಪಬ್ಲಿಸಿಟಿ ನಾಟಕ ಎಂದು ಅವರು ಬಣ್ಣಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ