ಕರುಣಾನಿಧಿ ಆರೋಗ್ಯ ಸ್ಥಿತಿ ಗಂಭೀರ: ತಮಿಳುನಾಡಿನಾದ್ಯಂತ ಕಟ್ಟೆಚ್ಚರ
ಇಂದು ಮಧ್ಯಾಹ್ನ ಸ್ಟಾಲಿನ್ ಮತ್ತು ಕುಟುಂಬ ವರ್ಗ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿಯವರನ್ನು ಭೇಟಿಯಾಗಿದ್ದು, ತಮ್ಮ ತಂದೆಯ ಆರೋಗ್ಯ ಸ್ಥಿತಿ ಗತಿ ಬಗ್ಗೆ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ಆಸ್ಪತ್ರೆಯ ಮೂಲಗಳು ಬಿಡುಗಡೆ ಮಾಡಲಿರುವ ಮಾಧ್ಯಮ ಹೇಳಿಕೆಯಿಂದ ತಿಳಿದುಬರಬೇಕಿದೆ.