ವಿಧಾನಸಭೆಯಲ್ಲಿ ಮಾತನ್ನಾಡುತ್ತಿದ್ದ ಜಯಾ, ಡಿಎಂಕೆ ಪ್ರಶ್ನೆಗಳಿಗೆ ಉತ್ತರಿಸಬೇಕೆಂದರೆ ಅವರ ನಾಯಕ ಯಾರು ಎಂಬ ದೊಡ್ಡ ಗೊಂದಲ ಎದುರಾಗಿದೆ. ಪಕ್ಷದ ಅಧ್ಯಕ್ಷರೆಂದು ಕರೆಸಿಕೊಳ್ಳುವ ಕರುಣಾನಿಧಿ ಅವರನ್ನು ಪಕ್ಷದ ನಾಯಕರೆಂದು ತಿಳಿಯುವುದೇ? ಅಥವಾ ವಿರೋಧ ಪಕ್ಷದ ನಾಯಕರಾಗಿ ಇಲ್ಲಿ ಕುಳಿತಿರುವ ಸ್ಟಾಲಿನ್ ಅವರನ್ನೇ? ಎಂದು ಪ್ರಶ್ನಿಸಿದ್ದಾರೆ.
ಕಚತೀವು ವಿವಾದಕ್ಕೆ ಸಂಬಂಧಿಸಿದಂತೆ ಜಯಲಲಿತಾ ಅವರು ಜೂನ್ 20 ರಂದು ಜಯಲಲಿತಾ ಭಾಷಣ ಮಾಡಿದ್ದ ಮರುದಿನ ಕರುಣಾನಿಧಿ ಹೇಳಿಕೆಯೊಂದನ್ನು ನೀಡಿದ್ದರು. ಆ ಹೇಳಿಕೆಯನ್ನು ಉಲ್ಲೇಖಿಸಿ ಮಾತನ್ನಾಡುತ್ತಿದ್ದ ಸಿಎಂ, ನಿಮ್ಮ ನಾಯಕರು ಯಾರೆಂದು ಉತ್ತರಿಸಿ ಅಥವಾ ಅವರನ್ನು ವಿಧಾನಸಭೆಗೆ ಕರೆ ತರುವುದಿದ್ದರೆ ಕರೆ ತನ್ನಿ. ನಿಮ್ಮ ನಾಯಕರು ಯಾರೆಂಬುದು ನನಗೆ ಗೊಂದಲವನ್ನು ಸೃಷ್ಟಿಸಿದೆ. ಹಾಗಿದ್ದಾಗ ನಾನು ನಿಮ್ಮ ಪ್ರಶ್ನೆಗಳಿಗೆ ಹೇಗೆ ಉತ್ತರಿಸಲು ಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ.