ಎಣ್ಣೆ ಕುಡಿಯಲು ಹಣ ಕೊಟ್ಟಿಲ್ಲವೆಂದು ಗರ್ಭಿಣಿ ಪತ್ನಿಯನ್ನು ಕೊಂದ!
ಪ್ರಿಯಾ ದೇವಿ ಮೃತಳಾಗಿದ್ದಾಳೆ. ತಿಲೇಶ್ವರ ಗಂಜು ಆರೋಪಿ ಪತಿಯಾಗಿದ್ದಾನೆ. ತಿಲೇಶ್ವರ್ ಕಳೆದ ವರ್ಷ ಮೇ 25ರಂದು ಪ್ರಿಯಾ ದೇವಿಯನ್ನು ಮದುವೆಯಾಗಿದ್ದ. ಕುಡಿತದ ಚಟಕ್ಕೆ ಬಿದ್ದ ಈತ ಹಣಕ್ಕಾಗಿ ಪತ್ನಿಯನ್ನು ಕೊಲೆ ಮಾಡಿದ್ದಾನೆ.
ಕಂಠ ಪೂರ್ತಿ ಕುಡಿದು ಬರುತ್ತಿದ್ದ ತಲೇಶ್ವರ ಪ್ರಿಯಾ ಗರ್ಭಿಣಿ ಎನ್ನುವುದು ಲೆಕ್ಕಿಸದೇ ಹೊಡೆದು ಹಿಂಸೆ ಮಾಡುತ್ತಿದ್ದನು. ಇದೇ ವಿಚಾರವಾಗಿ ಇಬ್ಬರ ನಡುವೆ ನಡೆದ ಜಗಳ ಪ್ರಿಯಾ ಪ್ರಾಣವನ್ನು ತೆಗೆದಿದೆ.
ಒಂದು ದಿನ ತಿಲೇಶ್ವರ ಪತ್ನಿ ಬಳಿ ಮದ್ಯ ಖರೀದಿ ಮಾಡಲು ಹಣ ಕೇಳಿದ್ದಾನೆ. ಆದರೆ ಆಕೆ ಹಣ ಕೊಡಲು ನಿರಾಕರಿಸಿದ್ದಾಳೆ. ಆಗ ಮನಬಂದಂತೆ ಆಕೆಗೆ ಹೊಡೆದು ಕತ್ತು ಹಿಸುಕಿ ಕೊಂದಿದ್ದಾನೆ. ಪ್ರಿಯಾ 7 ತಿಂಗಳ ಗರ್ಭಿಣಿಯಾಗಿದ್ದಳು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಿಳೆಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.