ಇತ್ತೀಚಿನ ದಿನಗಳಲ್ಲಿ ನಿಮ್ಮ ಬಗ್ಗೆ ಮೋದಿ ಬಹಳ ಖುಷಿಯಾಗಿದ್ದಾರೆ ಎಂದು ಕೇಳಿಪಟ್ಟೆ. ಎಮ್ಎಮ್ ಖಾನ್ ಹತ್ಯಾಕಾಂಡದಲ್ಲಿ ಬಿಜೆಪಿಯ ಹಾಲಿ ಸಂಸದ ಮಹೇಶ್ ಗಿರಿ ಮತ್ತು ಮಾಜಿ ಶಾಸಕ ಕರಣ್ ಸಿಂಗ್ ತಂವರ್ ಬಹುವಾಗಿ ಕೇಳಿ ಬರುತ್ತಿದೆ. ನೀವು ಬಹಳ ಚಾಲಾಕಿತನದಿಂದ ಪೊಲೀಸರ ಬಳಿ ಮಾತನಾಡಿ ಅವರನ್ನು ರಕ್ಷಿಸಿದ್ದೀರಿ. ಬಿಜೆಪಿಯವರು ಎಷ್ಟು ಗೂಂಡಾಗಿರಿ ಮಾಡಿದರೂ ಅವರ ಕೂದಲನ್ನು ಅಲ್ಲಾಡಿಸಲಾಗುವುದಿಲ್ಲ ಎಂದು ಪ್ರಧಾನಿ ಮೋದಿಯವರಿಗೆ ಈಗ ಖಚಿತವಾಗಿರಬೇಕು. ನೀವು ಅವರನ್ನು ರಕ್ಷಿಸುತ್ತೀರಿ ಮತ್ತು ಆಪ್ ಪಕ್ಷದವರನ್ನು ಸುಳ್ಳು ಪ್ರಕರಣ ಜಡಿದು ಸಿಕ್ಕಿಸಿ ಹಾಕುತ್ತಿರಿ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ನನ್ನ ಮೇಲಿನ ಆರೋಪವನ್ನು ಸಾಬೀತು ಮಾಡಿದರೆ ನಾನು ರಾಜಕಾರಣನ್ನು ಬಿಟ್ಟು ಬಿಡುತ್ತೇನೆ ಎಂದು ಸವಾಲು ಹಾಕಿರುವ ಗಿರಿ ಅರವಿಂದ ಕೇಜ್ರಿವಾಲ್ ಮನೆ ಎದುರು ಧರಣಿಗೆ ಕುಳಿತಿದ್ದಾರೆ. ಕೇಜ್ರಿವಾಲ್ ನನ್ನ ಮೇಲೆ ಹೊರಿಸಿರುವ ಆರೋಪವನ್ನು ಸಾಬೀತು ಪಡಿಸಲಿ, ಇಲ್ಲವಾದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಅವರು ಸವಾಲು ಹಾಕಿದ್ದಾರೆ.