ಕಾಂಗ್ರೆಸ್ 70 ವರ್ಷ ಸಂವಿಧಾನ ಸಂರಕ್ಷಿಸಿದ್ದಕ್ಕೇ ಮೋದಿಯಂತಹ ಚಾಯ್ ವಾಲಾ ಪ್ರಧಾನಿಯಾಗಿರೋದು: ಖರ್ಗೆ

ಸೋಮವಾರ, 9 ಜುಲೈ 2018 (10:08 IST)
ನವದೆಹಲಿ: ಕಾಂಗ್ರೆಸ್ ನ್ನು ಬೇಲ್ ಗಾಡಿ ಎಂದು ಟೀಕಿಸಿದ್ದ ಪ್ರಧಾನಿ ಮೋದಿಗೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.
 

ರಾಜಸ್ಥಾನದ ಚುನಾವಣಾ ರ್ಯಾಲಿಯೊಂದರಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್ ನ್ನು ಬೇಲ್ ಗಾಡಿ ಎಂದು ಹಿಗ್ಗಾ ಮುಗ್ಗಾ ಹೀಯಾಳಿಸಿದ್ದರು. ಇದಕ್ಕೆ ಈಗ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.

‘ಕಾಂಗ್ರೆಸ್ 70 ವರ್ಷ ಸಂವಿಧಾನವನ್ನು ಸಂರಕ್ಷಿಸಿಟ್ಟುಕೊಂಡು ಬಂದಿದ್ದಕ್ಕೇ ಮೋದಿಯಂತಹ ಚಾಯ್ ವಾಲಾ ಪ್ರಧಾನಿಯಾಗಲು ಸಾಧ್ಯವಾಯಿತು. ಆಗಾಗ ತುರ್ತು ಪರಿಸ್ಥಿತಿ ಹೇರಿದ್ದಕ್ಕೆ ಮೋದಿ ಕಾಂಗ್ರೆಸ್ ನ್ನು ದೂಷಿಸುತ್ತಾರೆ. ತುರ್ತು ಪರಿಸ್ಥಿತಿ 43 ವರ್ಷಗಳ ಹಿಂದೆ ಹೇರಲಾಗಿತ್ತು. ಆದರೆ ಕಳೆದ ನಾಲ್ಕು ವರ್ಷಗಳಿಂದ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ’ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ