ಹತ್ಯೆ ಮಾಡುವ ನೆಪದಲ್ಲಿ ಪತಿಯನ್ನು ಹನಿಮೂನ್ಗೆ ಕರೆದುಕೊಂಡು ಹೋಗಿ ಅಲ್ಲಿ ಪ್ರಿಯಕರನ ಜತೆ ಸೇರಿ ಹತ್ಯೆಯಾದ ಉದ್ಯಮಿ ರಾಜಾ ರಘುವಂಶಿ ಹತ್ಯೆ ಪ್ರಕರಣ ಸಂಬಂಧ ಇದೀಗ ಬಿಗ್ ಅಪ್ಡೇಟ್ ಸಿಕ್ಕಿದೆ.
ಪತ್ನಿ ಸೋನಮ್ ಜತೆ ಹನಿಮೂನ್ಗೆ ತೆರಳಿದ್ದ ರಾಜಾ ರಘುವಂಶಿ ಅವರು ನಾಪತ್ತೆಯಾಗಿದ್ದರು. ತೀವ್ರ ಶೋಧದ ಬಳಿಕ ರಘುವಂಶಿ ಅವರ ಮೃತದೇಹ ಕಮರಿಯಲ್ಲಿ ಸಿಕ್ಕಿತು. ಇನ್ನೂ ಪತ್ನಿ ಸೋನಮ್ ಪೊಲೀಸರ ಮುಂದೆ ಶರಣಾದಳು. ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತು.
ಇದೀಗ ಪ್ರಕರಣ ಸಂಬಂಧ ಮೇಘಾಲಯ ಪೊಲೀಸರು ಇಂದೋರ್ನಿಂದ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಇದು ಸೋನಮ್ ಪ್ರಿಯಕರ ರಾಜ್ ಕುಶ್ವಾಹಾ ಅವರಿಗೆ ಸೇರಿದ್ದು ಎನ್ನಲಾಗಿದೆ.
ಪ್ರಕರಣದ ಮಾಸ್ಟರ ಮೈಂಡ್ ಸೋನಮ್ ತನ್ನ ಪ್ರಿಯಕರ ರಾಜಾ ಕುಶ್ವಾಹಾ ಜತೆ ಸೇರಿಕೊಂಡು , ಪತಿ ರಾಜಾ ರಘುವಂಶಿಯನ್ನು ಕೊಲ್ಲಲು ಪುರುಷರನ್ನು ನೇಮಿಸಿದಳು.
ಕಳೆದ ಕೆಲವು ದಿನಗಳಿಂದ ಇಂದೋರ್ನಲ್ಲಿ ಬೀಡುಬಿಟ್ಟಿರುವ ಮೇಘಾಲಯ ಪೊಲೀಸ್ ತಂಡವು ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ನಿರ್ಣಾಯಕ ಸಾಕ್ಷ್ಯಗಳನ್ನು ಮರುಪಡೆಯುವಲ್ಲಿ ನಿರತವಾಗಿದೆ.
ಪಿಸ್ತೂಲ್ ದಾಖಲಾಗಿದೆಯೇ ಅಥವಾ ಎಲ್ಲಿ ಸಿಕ್ಕಿತು ಎಂಬುದರ ಕುರಿತು ಪೊಲೀಸರು ಇನ್ನೂ ಪ್ರತಿಕ್ರಿಯಿಸಿಲ್ಲ. ತನಿಖಾಧಿಕಾರಿಗಳು ಸೋನಂ ಅವರ ಲ್ಯಾಪ್ಟಾಪ್ಗಾಗಿ ಹುಡುಕುವಲ್ಲಿ ನಿರತರಾಗಿದ್ದಾರೆ.