ಪ್ರಧಾನಿ ಮೋದಿ ಈಗ ದೇಶದ ರಾಷ್ಟ್ರಪಿತ: ಬಿಜೆಪಿ ಮುಖಂಡನ ಹೇಳಿಕೆಗೆ ಕೋಲಾಹಲ

ಶನಿವಾರ, 9 ಡಿಸೆಂಬರ್ 2017 (19:21 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ರಾಷ್ಟ್ರಪಿತರಂತೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ನೀಡಿದ ವಿವಾದಾತ್ಮಕ ಹೇಳಿಕೆ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಎಲ್ಲೆಡೆಯಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.
ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ವಿಶ್ವದಾದ್ಯಂತ ಹರಡಿದೆ. ಅವರು ಈಗ ದೇಶದ ರಾಷ್ಟ್ರಪಿತ ಸ್ಥಾನದಲ್ಲಿದ್ದಾರೆ ಎಂದು ಸಂಬಿತ್ ಪಾತ್ರಾ ನೀಡಿದ ಹೇಳಿಕೆ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
 
ಸಂಬಿತ್ ಪಾತ್ರಾ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲಾ, ಸಂಬಿತ್ ಪಾತ್ರಾಗೆ ಗಾಂಧೀಜಿಯವರ ಬಗ್ಗೆ ಏನೂ ಗೊತ್ತಿಲ್ಲ. ಪ್ರಧಾನಿ ಮೋದಿ ಗಾಂಧಿಯವರಿಗಿಂತ ದೊಡ್ಡವರಲ್ಲ ಎಂದು ಕಿಡಿಕಾರಿದ್ದಾರೆ.
 
ಗಾಂಧೀಜಿಯವರು ನಡೆದ ಅಹಿಂಸಾ ಮಾರ್ಗ ಅಮೆರಿಕದಿಂದ ದಕ್ಷಿಣದವರೆಗೆ ಹರಡಿದೆ. ಗಾಂಧೀಜಿ ಶಾಂತಿ ಮಂತ್ರ ಎಲ್ಲೆಡೆಯೂ ಹರಡಿದೆ. ಯಾವುದೇ ಮಾಹಿತಿಯಿರದೇ ಮನಬಂದಂತೆ ಹೇಳಿಕೆ ನೀಡಬಾರದು. ಕೂಡಲೇ ಸಂಬಿತ್ ಪಾತ್ರಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ