ಮೋದಿ, ರಾಹುಲ್‌ನಿಂದ ಓಟ್‌ಬ್ಯಾಂಕ್‌ ರಾಜಕಾರಣ– ಓವೈಸಿ

ಶನಿವಾರ, 23 ಡಿಸೆಂಬರ್ 2017 (15:34 IST)
ಗುಜರಾತ್ ರಾಜ್ಯದ ದೇಗುಲಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡುತ್ತಿರುವುದು ಅಪ್ಪಟ ಓಟ್'ಬ್ಯಾಂಕ್ ರಾಜಕೀಯ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಟೀಕಿಸಿದ್ದಾರೆ.
 
ಕಾಂಗ್ರೆಸ್ ನಾಯಕರು ಮತ್ತು ಬಿಜೆಪಿ ನಾಯಕರನ್ನು ನೋಡಿದರೆ ಅವರು ಚುನಾವಣಾ ಪ್ರಚಾರವನ್ನು ಮಾಡುತ್ತಿರುವುದಂತೆ ಕಾಣುತ್ತಿಲ್ಲ. ದೇಗುಲಗಳಿಗೆ ಭೇಟಿ ನೀಡುತ್ತಿರುವಂತೆ ಕಾಣಿಸುತ್ತಿದೆ. ವಿಧಾನಸಭೆ ಹಾಗೂ ಸಂಸತ್ತು ಚುನಾವಣೆಗಳು ಆರಂಭಗೊಂಡಾಗ ಯಾತ್ರೆ ಹೇಗಿರುತ್ತದೆ ಎಂಬುದನ್ನು ತೋರಿಸುತ್ತೇನ ಎಂದು ಬೆಂಬಲಿಗರನ್ನು ಉದ್ದೇಶಿಸಿ ತಿಳಿಸಿದ್ದಾರೆ.
 
ಚುನಾವಣಾ ಪ್ರಚಾರ ಸಂದರ್ಭದಲ್ಲಿ ನಾನೂ ಕೂಡ ಮಸೀದಿ ಹಾಗೂ ದರ್ಗಾಗಳಿಗೆ ಭೇಟಿ ನೀಡುತ್ತೇನೆ. ಹಸಿರು ಧ್ವಜವನ್ನು ಹಿಡಿಯುತ್ತೇನೆ. ಬಿಜೆಪಿ ಬಗ್ಗೆ ನಾವು ಆಲೋಚಿಸುತ್ತಿಲ್ಲ. ಆದರೆ, ನಾವು ಪ್ರಚಾರ ಸಂದರ್ಭದಲ್ಲಿ ಹಸಿರನ್ನು ತೊಡುತ್ತೇವೆ ಎಂದಿರುವ ಅವರು, ಮೋದಿಯವರು ಸಬರ್ಮತಿ ನದಿ ಬಳಿ ನಡೆಸಿದ ಸೀ ಪ್ಲೇನ್ ಹಾರಾಟ ಕುರಿತಂತೆ ಕಿಡಿಕಾರಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ