ಕಣ್ಣು ಮುಚ್ಚಿದ್ರೆ ದೆವ್ವದ ಕಾಟ ಎಂದು ಈ ಮಹಾತಾಯಿ ಮಾಡಿದ್ದೇನು ಗೊತ್ತಾ?!

ಬುಧವಾರ, 17 ಅಕ್ಟೋಬರ್ 2018 (07:43 IST)
ನವದೆಹಲಿ: ಈ ಶತಮಾನದಲ್ಲೂ ದೆವ್ವವಿದೆ ಎಂದು ನಂಬುವವರು ಇದ್ದಾರೆ. ಆದರೆ ಈ ಮಹಿಳೆಯಂತೂ ಆ ನಂಬಿಕೆಯಲ್ಲಿ ತನ್ನ ಜತೆಗೆ ಐವರು ಮಕ್ಕಳ ಜೀವಕ್ಕೇ ಕುತ್ತು ತಂದಿದ್ದಾಳೆ.

ಗುಜರಾತ್ ನ ಭವನಗರ್ ಜಿಲ್ಲೆಯಲ್ಲಿ ತಾಯಿಯೊಬ್ಬಳು ದೆವ್ವದ ಕಾಟಕ್ಕೆ ಹೆದರಿ ತನ್ನ ಐವರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ದುರದೃಷ್ಟವಶಾತ್ ಆಕೆಯ ನಾಲ್ವರು ಮಕ್ಕಳು ತೀರಿಕೊಂಡಿದ್ದು, ಆಕೆ ಮತ್ತು ಹಿರಿಯ ಪುತ್ರಿಯ ಪ್ರಾಣ ರಕ್ಷಿಸಲಾಗಿದೆ.

ಪೊಲೀಸ್ ವಿಚಾರಣೆ ವೇಳೆ ಈಕೆ ನನಗೆ ಕಣ್ಣು ಮುಚ್ಚಿದರೆ ದೆವ್ವವೇ ಕಾಣುತ್ತಿತ್ತು. ಇದಕ್ಕೆ ಈ ಕೃತ್ಯಕ್ಕೆ ಮುಂದಾದೆ ಎಂದಿದ್ದಾಳೆ. ಕೆಲವು ಮೂಲಗಳ ಪ್ರಕಾರ ಈಕೆ ಬಡ ಕುಟುಂಬದವಳಾಗಿದ್ದು, ಸಾಕಷ್ಟು ಸಾಲವಿತ್ತು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ