ಹಿರಿಯರಾಗಿದ್ರೂ ಜನಮನ್ನಣೆ ಇರದ ನಾಯಕರಿಗೆ ಟಿಕೆಟ್ ಇಲ್ಲ: ರಾಹುಲ್

ಸೋಮವಾರ, 12 ಜೂನ್ 2017 (18:45 IST)
ಕಾಂಗ್ರೆಸ್ ಪಕ್ಷದ ನಾಯಕರು ಎಷ್ಟೇ ಹಿರಿಯರಾಗಿದ್ದರೂ ಜನಸಂಪರ್ಕವಿರದಿದ್ದಲ್ಲಿ ಅಂತಹವರಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
 
ಸದಾ ಜನರೊಂದಿಗೆ ಬೆರೆತು ಜನತೆಯ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವವನೇ ನಿಜವಾದ ನಾಯಕ. ಅಂತಹ ನಾಯಕರಿಗೆ ಮಾತ್ರ ಟಿಕೆಟ್ ನೀಡುವಂತೆ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರಿಗೆ ಸಲಹೆ ನೀಡಿದ್ದಾಗಿ ತಿಳಿಸಿದ್ದಾರೆ.
 
ಕಾಂಗ್ರೆಸ್ ಪಕ್ಷದ ಟಿಕೆಟ್ ಹೆಲಿಕಾಪ್ಟರ್‌ನಲ್ಲಾಗಲಿ ಅಥವಾ ಪೋಸ್ಟ್ ಮೂಲಕವಾಗಲಿ ಬರುವುದಿಲ್ಲ. ಪಕ್ಷವನ್ನು ಸಂಘಟಿಸಿ ಜನರ ಪರ ಕಾಳಜಿ ಹೊಂದಿರುವವರಿಗೆ ಟಿಕೆಟ್ ತಾನಾಗಿಯೇ ತಲುಪಲಿದೆ ಎಂದರು.
 
ಚುನಾವಣೆಗೆ ಇನ್ನೂ ಒಂದು ವರ್ಷದ ಕಾಲಾವಧಿಯಿದೆ. ಸಚಿವರು, ಶಾಸಕರು ಕೂಡಲೇ ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಿ ಜನರೊಂದಿಗೆ ಬೆರೆತು. ಅವರ ಸಂಕಷ್ಟಗಳನ್ನು ಪರಿಹರಿಸಿ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕಿವಿಮಾತು ಹೇಳಿದ್ದಾರೆ. 

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ