'ರಾಹುಲ್‌ ಗಾಂಧಿಯನ್ನು ಪ್ರಧಾನಿಯಾಗಿ ಸ್ವೀಕರಿಸಲು ಯಾರೂ ಸಿದ್ಧರಿಲ್ಲ- ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌

ಮಂಗಳವಾರ, 29 ಜನವರಿ 2019 (10:08 IST)
ನವದೆಹಲಿ :ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದ್ದು ಮೋದಿ ಅವರೇ ಪುನಃ ಪ್ರಧಾನಿಯಾಗುವುದು ಖಂಡಿತಾ’ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌ ಭವಿಷ್ಯ ನುಡಿದಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 'ದೇಶಕ್ಕೆ ಸಮರ್ಥ ನಾಯಕತ್ವದ ಅಗತ್ಯವಿದೆ. ಅದಕ್ಕೆ ಮೋದಿಯವರೇ ಸೂಕ್ತ ವ್ಯಕ್ತಿ. ಭಾರತದ ಗಡಿ ದೇಶಗಳ ಪೈಕಿ ಹೆಚ್ಚಿನವು ನಮಗೆ ವೈರಿಗಳಾಗಿವೆ. ಇಂಥ ಸನ್ನಿವೇಶದಲ್ಲಿ ಸ್ಥಿರ ಸರಕಾರದ ಅವಶ್ಯಕತೆಯೂ ಇದೆ’ ಎಂದು ಹೇಳಿದ್ದಾರೆ.


'ರಾಹುಲ್‌ ಗಾಂಧಿ ಅವರನ್ನು ಸ್ವೀಕರಿಸಲು ಯಾರೂ ಸಿದ್ಧರಿಲ್ಲ. ಕಾಂಗ್ರೆಸ್‌ ಪಕ್ಷ ತನ್ನ ರಾಜಕೀಯ ವಿರೋಧಿಗಳು ಅಧಿಕಾರ ನಡೆಸುವುದನ್ನು ಸಹಿಸುವುದಿಲ್ಲ. ದೇಶಕ್ಕೆ ಕಾಂಗ್ರೆಸ್‌ ಮಾಡಿದ್ದೇನು ಎನ್ನುವುದು ಜನತೆಗೆ ಗೊತ್ತಿದೆ, ಆದುದರಿಂದ ಮುಂದಿನ ಪ್ರಧಾನಿ ಮೋದಿ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ