ನಾವು ಯಾವ ಡ್ಯೂಟಿಗೆ ಹಾಕಿದರೂ ಕೆಲಸ ಮಾಡುತ್ತೇವೆ. ರಾಜ್ಯಸಭಾ, ಲೋಕಸಭಾ ಚುನಾವಣೆಯಿಂದ ಹಿಡಿದು ಗ್ರಾಮ ಪಂಚಾಯತ್ ಚುನಾವಣೆ, ಗುರುದ್ವಾರ, ಮಂದಿರ, ಮಸೀದಿ ರಕ್ಷಣೆ, ವಿವಿ,ಐಪಿ ವಿಐಪಿ ಭದ್ರತೆ- ಹೀಗೆ ಎಲ್ಲರಿಗಿಂತ ಹೆಚ್ಚು ಕೆಲಸ ಮಾಡುವ ನಮಗೆ ಮಾತ್ರ ಸೌಲಭ್ಯಗಳಿಂದ ವಂಚಿಸಲಾಗುತ್ತದೆ.
ಸೇನೆ ಮತ್ತು ಅರೆ ಸೇನೆಯ ನಡುವೆ ಭೇದಭಾವ ಮಾಡಲಾಗುತ್ತದೆ. ಅವರಿಗೆ ನೀಡುವ ಸೌಲಭ್ಯಗಳ ಬಗ್ಗೆ ನಮಗೆ ತಕರಾರಿಲ್ಲ. ಆದರೆ ನಮಗೂ ಬೇಕು ಎನ್ನುವುದು ಬೇಡಿಕೆ. ಸೇನೆಗೆ ಪಿಂಚಣಿ ನೀಡಲಾಗುತ್ತಿದೆ. ನಮಗೆ ನೀಡಲಾಗುತ್ತಿದ್ದ ಪಿಂಚಣಿಯನ್ನು ಸ್ಥಗಿತಗೊಳಿಸಲಾಗಿದೆ. ಮಾಜಿ ಸೈನಿಕರ ಕೋಟಾವೂ ನಮಗಿಲ್ಲ. ಕ್ಯಾಂಟೀನ್ ಸೌಲಭ್ಯವಿಲ್ಲ.ಯಾವುದೇ ವೈದ್ಯಕೀಯ ಸೌಲಭ್ಯಗಳು ದೊರೆಯುತ್ತಿಲ್ಲ', ಎಂದು ಗೋಳು ತೋಡಿಕೊಂಡಿರುವ ಆತ ಈ ಕುರಿತು ಗಮನ ಹರಿಸುವಂತೆ ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾನೆ.