ಇಲ್ಲಿ ಕೋವಿಡ್ ಪ್ರಕರಣದ ಬಗ್ಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದ ಪಿ.ಚಿದಂಬರಂ

ಸೋಮವಾರ, 19 ಏಪ್ರಿಲ್ 2021 (12:47 IST)
ನವದೆಹಲಿ : ಗುಜರಾತ್ ನಲ್ಲಿ ಕೋವಿಡ್ ಪ್ರಕರಣದ ಬಗ್ಗೆ ಸರಿಯಾಗಿ ಮಾಹಿತಿ ನೀಡಲಾಗುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಆರೋಪಿಸಿದ್ದಾರೆ.

ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ ಚಿದಂಬರಂ ಅವರು, ಕೊರೊನಾದಿಂದ ಆದ ಸಾವನ್ನು ಹೃದಯ ಸ್ತಂಭನ, ದೀರ್ಘಕಾಲದ ಮಧುಮೇಹದಿಂದಾಗಿದೆ ಎಂದು ತಪ್ಪಾಗಿ ವರದಿ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಗುಜರಾತ್ ನಲ್ಲಿ ಶುಕ್ರವಾರ 78 ಮಂದಿ ಕೋವಿಡ್ ನಿಂದಾಗಿ ಸಾವನಪ್ಪಿದ್ದಾರೆ ಎಂದು ಅಧಿಕೃತವಾಗಿ ವರದಿ ಮಾಡಿದ್ದರೆ. ಕೊವಿಡ್ ಪ್ರೋಟೋಕಾಲ್ ಅನುಸರಿಸಿ ಏಳು ನಗರಗಳಲ್ಲಿ 689 ಶವಗಳನ್ನು ದಹನ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ   ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ