ತಮಿಳುಮಾಡಿನ ರಾಜಕೀಯ ದಿನದಿನಕ್ಕೂ ಕುತೂಹಲವನ್ನು ಕೆರಳಿಸುತ್ತಿದೆ. ಜಯಲಲಿತಾ ನಿಧನರಾಗುತ್ತಿದ್ದಂತೆ ಸಿಎಂ ಕುರ್ಚಿಗಾಗಿ ಕನಸು ಕಾಣುತ್ತಿದ್ದ ಶಶಿಕಲಾ ನಟರಾಜನ್ ಸುಪ್ರೀಂ ತೀರ್ಪಿನಡಿಯಲ್ಲಿ ಜೈಲು ಸೇರುವಂತಾಗಿದೆ. ಇತ್ತ ಅವರು ಜೈಲು ಸೇರುತ್ತಿದ್ದಂತೆ ಅತ್ತ ಚೆನ್ನೈನಲ್ಲಿ ಪನ್ನೀರ್ ಮತ್ತು ಪಳನಿ ಮುಖ್ಯಮಂತ್ರಿ ಪಟ್ಟಕ್ಕೇರಲು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ.