ರಾಹುಲ್ ಗಾಂಧಿಗೆ ತೆಂಗಿನ ಕಾಯಿಯೊಳಗೆ ಏನಿದೆ ಅಂತಾನೇ ಗೊತ್ತಿಲ್ಲ: ಪ್ರಧಾನಿ ಮೋದಿ ಲೇವಡಿ

ಗುರುವಾರ, 2 ಮಾರ್ಚ್ 2017 (05:51 IST)
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮೇಲೆ ಚಾಟಿ ಬೀಸಿದ್ದಾರೆ. ಅವರೊಬ್ಬ ಎಂತಹ ದೂರದೃಷ್ಟಿಯುಳ್ಳ ನಾಯಕ ಎಂದು ಲೇವಡಿ ಮಾಡಿದ್ದಾರೆ.


ಚುನಾವಣಾ ಪ್ರಚಾರವೊಂದರಲ್ಲಿ ಮಾತನಾಡಿದ ಮೋದಿ “ನೋಡಿ ನಮ್ಮಲ್ಲಿ ಎಂತಹ ದೂರದೃಷ್ಟಿಯ ಕಾಂಗ್ರೆಸ್ ನಾಯಕರಿದ್ದಾರೆ. ಅವರು ಮಣಿಪುರದ್ಲಲಿ ಹೋಗಿ ಹೀಗೆ ಹೇಳುತ್ತಾರೆ. ನಾನು ತೆಂಗಿನ ಕಾಯಿಯ ಜ್ಯೂಸ್ ತೆಗೆದು ಲಂಡನ್ ಗೆ ರಫ್ತು ಮಾಡುತ್ತೇನೆ ಅಂತ. ಅವರಿಗೆ ತೆಂಗಿನ ಕಾಯಿಯಿಂದ ಜ್ಯೂಸ್ ಬರುತ್ತಾ, ನೀರು ಇರುತ್ತಾ ಎನ್ನುವುದೇ ಗೊತ್ತಿಲ್ಲ. ಅಷ್ಟಕ್ಕೂ ತೆಂಗಿನಕಾಯಿ ಬೆಳೆಯುವುದು ಕೇರಳದಲ್ಲಿ. ಇಂತಹಾ ಜನ ನಾಯಕನಿಗೆ ದೇವರು ದೀರ್ಘಾಯುಷ್ಯ ನೀಡಲಿ” ಎಂದು ವ್ಯಂಗ್ಯವಾಡಿದ್ದಾರೆ.

ಇದಲ್ಲದೆ ಭಾರತದ ಜಿಡಿಪಿ 7 ಶೇಕಡಾ ಹೆಚ್ಚಳವಾಗಿದ್ದಕ್ಕೆ ಈ ಮೊದಲು ನೋಟು ನಿಷೇಧ ಮಾಡಿದಾಗ ತಮ್ಮನ್ನು ಟೀಕಿಸಿದ ಅರ್ಥಶಾಸ್ತ್ರಜ್ಞ ಅಮರ್ಥ್ಯ ಸೇನ್ ಸೇರಿದಂತೆ ಹಲವರಿಗೆ ಚಾಟಿ ಬೀಸಿದ್ದಾರೆ. ಹಾರ್ವರ್ಡ್ ವಿವಿಯ ಪದವಿಗಿಂತ, ಹಾರ್ಡ್ ವರ್ಕ್ ದೊಡ್ಡದು ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ