ವಯನಾಡಿನಿಂದಲೂ ಓಡಿಹೋಗಬೇಕಾಗುತ್ತದೆ: ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ಟಾಂಗ್

Krishnaveni K

ಶನಿವಾರ, 20 ಏಪ್ರಿಲ್ 2024 (14:36 IST)
ಮುಂಬೈ: ಅಮೇಠಿಯಿಂದ ಸೋಲಿನ ಭಯದಿಂದ ಓಡಿ ಹೋದ ಕಾಂಗ್ರೆಸ್ ರಾಜಕುಮಾರ ಮುಂದೆ ವಯನಾಡಿನಿಂದಲೂ ಓಡಿ ಹೋಗಬೇಕಾಗುತ್ತದೆ ಎಂದು ರಾಹುಲ್ ಗಾಂಧಿ ಹೆಸರು ಹೇಳದೇ ಪ್ರಧಾನಿ ಮೋದಿ ಟಾಂಗ್ ಕೊಟ್ಟಿದ್ದಾರೆ.

ಮಹಾರಾಷ್ಟ್ರದಲ್ಲಿ ಇಂದು ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ಅಮೇಠಿಯಿಂದ ಕಾಂಗ್ರೆಸ್ ರಾಜಕುಮಾರನನ್ನು ಸ್ಮೃತಿ ಇರಾನಿ ಓಡಿಸಿದರು. ಇದೀಗ ವಯನಾಡಿನಿಂದಲೂ ಅವರಿಗೆ ಓಡುವ ಪರಿಸ್ಥಿತಿ ಬರಬಹುದು ಎಂದಿದ್ದಾರೆ.

‘ಕಾಂಗ್ರೆಸ್ ರಾಜಕುಮಾರನಿಗೆ ವಯನಾಡಿನಲ್ಲೂ ಅಪಾಯ ಎದುರಾಗಿದೆ. ಇತ್ತೀಚೆಗೆ ಕೇರಳ ಸಿಎಂ ಪಿಣರಾಯಿ  ವಿಜಯ್ ಯಾವ ಭಾಷೆಯಲ್ಲಿ ಅವರಿಗೆ ಬೈದಿದ್ದಾರೆಂದರೆ ನಾನು ಕೂಡಾ ಅಂತಹ ಪದ ಬಳಕೆ ಮಾಡುವುದಿಲ್ಲ. ವಯನಾಡಿನಲ್ಲಿ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್ ತನ್ನ ರಾಜಕುಮಾರನಿಗೆ ಮತ್ತೊಂದು ಸೀಟು ಹುಡುಕಾಡಲಿದೆ’ ಎಂದು ವ್ಯಂಗ್ಯ ಮಾಡಿದ್ದಾರೆ.

ಕಾಂಗ್ರೆಸ್ ಗಾಂಧಿ ಕುಟುಂಬ ಸ್ಪರ್ಧಿಸುತ್ತಿದ್ದ ರಾಯ್ ಬರೇಲಿ ಮತ್ತು ಅಮೇಠಿಗೆ ಇದುವರೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಹೀಗಾಗಿ ಈ ಬಗ್ಗೆ ಟಾಂಗ್ ಕೊಟ್ಟಿರುವ ಮೋದಿ ಕಾಂಗ್ರೆಸ್ ಪಕ್ಷಕ್ಕೆ ಇಷ್ಟು ವರ್ಷ ತಲೆತಲಾಂತರದಿಂದ ಸ್ಪರ್ಧಿಸುತ್ತಾ ಬಂದಿದ್ದ ಕ್ಷೇತ್ರದಲ್ಲಿ ಈ ಬಾರಿ ವೋಟ್ ಸಿಗಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ