ಹಣೆಗೆ ಹಚ್ಚಿದ್ದ ಕುಂಕುಮ ಅಳಿಸಿದ್ದಕ್ಕೆ ಟ್ರೋಲ್ ಆದ ಶಿವರಾಜ್ ಕುಮಾರ್

Krishnaveni K

ಶನಿವಾರ, 20 ಏಪ್ರಿಲ್ 2024 (10:05 IST)
ಶಿವಮೊಗ್ಗ: ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಪತ್ನಿ ಗೀತಾ ಪರವಾಗಿ ಪ್ರಚಾರ ಮಾಡುವುದರಲ್ಲಿ ನಟ ಶಿವರಾಜ್ ಕುಮಾರ್ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರ ವಿಡಿಯೋ ಒಂದು ಈಗ ವೈರಲ್ ಆಗಿದೆ.

ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸುತ್ತಿದ್ದಾರೆ. ಸಮಾವೇಶವೊಂದರಲ್ಲಿ ಗೀತಾ ಶಿವರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ವೇದಿಕೆಯಲ್ಲಿ ಜೊತೆಯಾಗಿ ಬಂದು ಕೂರುತ್ತಾರೆ. ಆದರೆ ವೇದಿಕೆ ಬರುವಾಗ ಶಿವಣ್ಣನ ಹಣೆ ಮೇಲೆ ಕುಂಕುಮವಿರುತ್ತದೆ.

ವೇದಿಕೆಯಲ್ಲೇ ಈ ಕುಂಕುಮವನ್ನು ಶಿವರಾಜ್ ಕುಮಾರ್ ಅಳಿಸಿ ಹಾಕುತ್ತಾರೆ. ಇದನ್ನು ನೋಡಿದ ಕೆಲವರು ಶಿವಣ್ಣನ ವರ್ತನೆಯನ್ನು ಟೀಕಿಸಿದ್ದಾರೆ. ಕುಂಕುಮ ನಮ್ಮ ಸಂಪ್ರದಾಯ. ಪಕ್ಷದ ಪ್ರಚಾರ ಮಾಡುವಾಗ ಕುಂಕುಮ ಅಳಿಸುವ ಅಗತ್ಯವೇನಿದೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ಶಿವರಾಜ್ ಕುಮಾರ್ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಲು ಹೊರಟಾಗಲೇ ಕೆಲವರು ಅಪಸ್ವರವೆತ್ತಿದ್ದರು. ದೊಡ್ಮನೆಯವರು ಮೊದಲಿನಿಂದಲೂ ರಾಜಕೀಯದಿಂದ ದೂರವೇ ಇದ್ದಾರೆ. ರಾಜಕೀಯ ಮೀರಿ ಜನರು ಅವರನ್ನು ಗೌರವಿಸುತ್ತಾರೆ. ಹೀಗಿರುವಾಗ ಶಿವಣ್ಣನಿಗೆ ರಾಜಕೀಯ ಬೇಡ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು. ಆದರೆ ಈಗ ಕುಂಕುಮ ಅಳಿಸುವ ವಿಡಿಯೋ ನೋಡಿ ಮತ್ತಷ್ಟು ಜನ ಟೀಕೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ