ಉಗ್ರ ಬುರ್ಹಾನ್ ವನಿಯನ್ನು ಹಿರೋನಂತೆ ಬಿಂಬಿಸಿದ ಮಾಧ್ಯಮಗಳ ವಿರುದ್ಧ ಪಿಎಂ ಅಸಮಾಧಾನ
ಬುಧವಾರ, 13 ಜುಲೈ 2016 (14:28 IST)
ಹಿಜ್ಬುಲ್ ಮುಜಾಹೀದಿನ್ ಕಮಾಂಡರ್ ಬುರ್ಹಾನ್ ವನಿ ಹತ್ಯೆಯನ್ನು ಮಾಧ್ಯಮಗಳು ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡಿ ಹೀರೋನಂತೆ ಬಿಂಬಿಸುತ್ತಿರುವುದರ ವಿರುದ್ಧ ಪ್ರಧಾನಿ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳು ಹೀರೋ ಎಂದು ಬಿಂಬಿಸಿ ಪ್ರಚಾರ ನೀಡುತ್ತಿರುವುದರಿಂದಲೇ ಕಾಶ್ಮಿರದಲ್ಲಿ ಹಿಂಸಾಚಾರಾ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಮೋದಿ ಹೇಳಿದ್ದಾರೆ.
ಉಗ್ರ ಬುರ್ಹಾನ್ ವನಿ ಹತ್ಯೆಯ ನಂತರ ಉನ್ನತ ಮಟ್ಟದ ಸಭೆ ನಡೆಸಿದ ಮೋದಿ, ಹಿಂಸಾಚಾರವನ್ನು ಅಂತ್ಯಗೊಳಿಸಿ ಶಾಂತಿಯನ್ನು ಕಾಪಾಡಿ ಎಂದು ಜಮ್ಮು ಕಾಶ್ಮಿರದ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಭಯೋತ್ಪಾದನೆ ಚಟುವಟಿಕಗಳಲ್ಲಿ ದೇಶವನ್ನು ವಿಭಜಿಸುವಂತಹ ಕೃತ್ಯಗಳಲ್ಲಿ ತೊಡಗಿದ್ದ ಭಯೋತ್ಪಾದಕನನ್ನು ಹೀರೋನಂತೆ ಬಿಂಬಿಸುತ್ತಿರುವ ಮಾಧ್ಯಮಗಳ ಉದ್ದೇಶ ಸರಿಯಲ್ಲ ಎಂದು ತಿಳಿಸಿದ್ದಾರೆ.
ಬುರ್ಹಾನ್ ವನಿ ವಿರುದ್ಧ 12 ಕ್ಕೂ ಗಂಬೀರವಾದ ಪ್ರಕರಣಗಳು ದಾಖಲಾಗಿವೆ ಎನ್ನುವುದನ್ನು ಜಮ್ಮು ಕಾಶ್ಮಿರ ಜನತೆ ಮರೆಯಬಾರದು. ರಾಜ್ಯದಲ್ಲಿ ಶಾಂತಿಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.