ದೆವ್ವದ ಕಾಟ: ಕಾನ್ ಸ್ಟೇಬಲ್ ಆತ್ಮಹತ್ಯೆ

ಬುಧವಾರ, 17 ನವೆಂಬರ್ 2021 (17:08 IST)
ಚೆನ್ನೈ: ಕನಸಿನಲ್ಲಿ ದೆವ್ವದ ಕಾಟಕ್ಕೆ ಹೆದರಿ ಪೊಲೀಸ್ ಕಾನ್ ಸ್ಟೇಬಲ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಕಾನ್ ಸ್ಟೇಬಲ್ ಪ್ರಭಾಕರನ್ ಮೃತಪಟ್ಟವರು. ಕಳೆದ ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದ ಪ್ರಭಾಕರನ್ ಚೇತರಿಸಿಕೊಂಡಿದ್ದರು. ಆದರೆ ಅದಾದ ಬಳಿಕ ಕನಸಿನಲ್ಲಿ ಬಿಳಿ ಸೀರೆಯುಟ್ಟ ಮಹಿಳೆಯೊಬ್ಬಳು ಕತ್ತು ಹಿಸುಕಲು ಬರುವ ಕನಸು ಪದೇ ಪದೇ ಬೀಳುತ್ತಿತ್ತಂತೆ.

ಈ ಬಗ್ಗೆ ಸ್ನೇಹಿತರಲ್ಲೂ ಹೇಳಿಕೊಂಡಿದ್ದರು. ಈ ಬಗ್ಗೆ ಜ್ಯೋತಿಷಿಗಳಲ್ಲಿ ಕೇಳಿದಾಗ ಪ್ರೇತ ಬಾಧೆಯಿರಬಹುದು ಎಂದಿದ್ದರಂತೆ. ಇದರಿಂದ ಭಯಗೊಂಡು ಕುಟುಂಬಸ್ಥರು ಮನೆಯಲ್ಲಿಲ್ಲದ ವೇಳೆ ನೇಣುಬಿಗಿದುಕೊಂಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ