ಪ್ರಿಯಾಂಕಾ ಗಾಂಧಿಗೆ ವೇರಿ ಸ್ಸಾರಿ ಎಂದ ಪೊಲೀಸರು

ಭಾನುವಾರ, 4 ಅಕ್ಟೋಬರ್ 2020 (20:52 IST)
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹಾಗೂ ಸಂಸದ ರಾಹುಲ್ ಗಾಂಧಿಗೆ ಪೊಲೀಸರು ಕ್ಷಮೆ ಯಾಚಿಸಿದ್ದಾರೆ.

ಉತ್ತರ ಪ್ರದೇಶದ ಪೊಲೀಸರು ಕಾಂಗ್ರೆಸ್ ನ ಈ ಇಬ್ಬರು ನಾಯಕರಿಗೆ ಕ್ಷಮೆ ಕೇಳಿದ್ದಾರೆ.

ಹತ್ರಾಸ್ ಘಟನೆಯ ಸಂತ್ರಸ್ತೆಯ ಮನೆ ಮಂದಿಗೆ ಭೇಟಿಯಾಗಲು ರಾಹುಲ್, ಪ್ರಿಯಾಂಕಾ ಹೊರಟಿದ್ದರು. ಆಗ ಮಾರ್ಗ ನಡುವೆ ಉಂಟಾದ ಗದ್ದಲದಲ್ಲಿ ರಾಹುಲ್ ಗಾಂಧಿ ತಳ್ಳಲ್ಪಟ್ಟು ನೆಲಕ್ಕೆ ಬಿದ್ದಿದ್ದರು.

ಇನ್ನು ಪ್ರಿಯಾಂಕಾ ಗಾಂಧಿ ಯವರ ಕುರ್ತಾವನ್ನು ಪುರುಷ ಪೊಲೀಸ್ ಕಾನ್ಸಟೇಬಲ್ ಹಿಡಿದಿದ್ದ ಫೋಟೊ ವೈರಲ್ ಆಗಿತ್ತು.

ಇದೀಗ ಉತ್ತರ ಪ್ರದೇಶದ ಪೊಲೀಸರು ಘಟನೆ ಹಿನ್ನೆಲೆಯಲ್ಲಿ ಈ ಕಾಂಗ್ರೆಸ್ ನ ನಾಯಕರ ಕ್ಷಮೆ ಕೇಳಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ