ವಿರಾಜ್ ಶಾಹ್ ಪುಣೆಯ ನಿವಾಸಿಯಾಗಿದ್ದು ಅಮಿತ್ ಶಾಹ್ ಅವರ ಅಳಿಯ ಎಂದು ಪರಿಚಯಿಸಿಕೊಂಡ ಯುವಕ ತಾನು ಶಾಂತಿ ಎಕ್ಸ್ಪ್ರೆಸ್ ರೈಲಿನ ಎ1 ಎಸಿ ಕೋಚ್ನಲ್ಲಿ ಪ್ರಯಾಣಿಸುತ್ತಿದ್ದು ಲ್ಯಾಪ್ಟಾಪ್ ಸೇರಿದಂತೆ ದುಬಾರಿ ವಾಚ್, ಮೊಬೈಲ್ ಮತ್ತು ಚಿನ್ನಾಭರಣಗಳ ಕಳ್ಳತನವಾಗಿವೆ ಎಂದು ರೈಲ್ವಎ ಪೊಲೀಸರಿಗೆ ದೂರು ನೀಡಿ, ನಂತರ ಉಜ್ಜೈನಿಯ ಶಾಸಕ ಮೋಹನ್ ಯಾದವ್ಗೆ ಫೋನ್ ಕರೆ ಮಾಡಿ ಸಹಾಯ ಯಾಚಿಸಿದ್ದಾನೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಹತ್ತಿರವಾಗುವ ಬಯಕೆಯಿಂದ ಶಾಸಕ ಮೋಹನ್ ಯುವಕನಿಗೆ 50 ಸಾವಿರ ರೂಪಾಯಿಗಳ ನಗದು ನೀಡಿ, 15 ಸಾವಿರ ರೂಪಾಯಿ ಮೊಬೈಲ್ ನೀಡಿದ್ದಲ್ಲದೇ ಅಹ್ಮದಾಬಾದ್ಗೆ ತೆರಳುವ ವಿಮಾನ ಟಿಕೆಟ್ ಕೂಡಾ ಬುಕ್ ಮಾಡಿದ್ದಾರೆ. ಒಂದು ದಿನ ಯುವಕನನ್ನು ಉಜ್ಜೈನಿಯಲ್ಲಿರಿಸಿಕೊಂಡು ಮಹಾಕಾಳ್ ದರ್ಶನ ದೇವಾಲಯದ ದರ್ಶನ ಕೂಡಾ ಮಾಡಿಸಿದ್ದಾರೆ.