ಹಿಂದೂಗಳ ಮತಕ್ಕಾಗಿ ರಾಹುಲ್‍ ಗಾಂಧಿ ಹಿಂದೂವಾಗಲು ಹೊರಟಿದ್ದಾರೆ- ಸ್ಮೃತಿ ಇರಾನಿ

ಶನಿವಾರ, 2 ಡಿಸೆಂಬರ್ 2017 (17:12 IST)
ಹಿಂದೂಗಳ ಮತಗಳನ್ನು ಸೆಳೆಯುವ ಉದ್ದೇಶದಿಂದ ಕಾಂಗ್ರೆಸ್‍‍ನ ರಾಹುಲ್‍ ಗಾಂಧಿ ಅವರು ಗುಜರಾತ್‍‍ನ ದೇವಾಲಯಗಳಿಗೆ ಭೇಟಿ ನೀಡುವ ಹಿಂದೂವಾಗಲು ಹೊರಟಿದ್ದಾರೆ ಎಂದು ಕೇಂದ್ರದ ಜವಳಿ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ಗುಜರಾತ್‍‍ನಲ್ಲಿ ಅಭ್ಯರ್ಥಿಯೊಬ್ಬರ ಚುನಾವಣೆ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇವಾಲಯಗಳಿಗೆ ಭೇಟಿ ಕೊಡುತ್ತಿರುವ ರಾಹುಲ್ ಗಾಂಧಿ ಅವರು ಭಕ್ತಿ ತೋರುತ್ತಿರುವ ನಾಟಕವಾಡುತ್ತಿದ್ದಾರೆ ಎಂದು ವ್ಯಂಗವಾಡಿದರು.

ಗುಜರಾತ್ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್ಸಿಗರು ಹಿಂದೂಗಳೆಂದು ಹೇಳಿಕೊಳ್ಳುತ್ತಿದ್ದಾರೆ. ಗೋ ಹತ್ಯೆ ಮಾಡುವುದನ್ನು ಕಣ್ಣಾರೆ ಕಂಡು ಕಾಣದಂತಿದ್ದ ವ್ಯಕ್ತಿ ಈಗ ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾನೆ. ಸಾಮಾನ್ಯ ಜನರನ್ನೂ ಬಿಟ್ಟಿಲ್ಲ. ದೇವರನ್ನಾದರೂ ಬಿಡಿ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ