ಬಿಎಂಸಿ ಚುನಾವಣೆ: ಉದ್ಭವ್ ಠಾಕ್ರೆಯನ್ನು ಭೇಟಿಯಾದ ರಾಜ್‌ ಠಾಕ್ರೆ

ಶುಕ್ರವಾರ, 29 ಜುಲೈ 2016 (15:13 IST)
ಮುಂದಿನ ವರ್ಷದ ಆರಂಭದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಎದುರಾಗಲಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ, ಸಹೋದರ, ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
 
ದಾದರ್‌ನಲ್ಲಿ ವಾಸಿಸುವ ರಾಜ್ ಠಾಕ್ರೆ, ಇಂದು ಸಬ್‌ಅರ್ಬನ್ ಬಾಂದ್ರಾದಲ್ಲಿರುವ ಉದ್ಭವ್ ಠಾಕ್ರೆ ನಿವಾಸವಾದ ಮಾತೋಶ್ರೀಗೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಚರ್ಚೆಯ ಸಂದರ್ಭದಲ್ಲಿ ಬೇರೆ ಯಾರೂ ಉಪಸ್ಥಿತರಿರಲಿಲ್ಲ ಎಂದು ಮೂಲಗಳು ತಿಳಿಸಿವೆ. 
 
ಉಭಯ ಸಹೋದರರಿಗೆ ಬಿಎಂಸಿ ಚುನಾವಣೆಗಳು ಮಹತ್ವದ್ದಾಗಿದ್ದರಿಂದ ಭೇಟಿಯ ಬಗ್ಗೆ ರಾಜಕೀಯ ವಲಯದಲ್ಲಿ ಕೋಲಾಹಲವೆಬ್ಬಿಸಿವೆ.
 
ಬಿಎಂಸಿ ಕಾರ್ಪೋರೇಶನ್‌ನಲ್ಲಿ ಬಿಜೆಪಿಯೊಂದಿಗೆ ಮೈತ್ರಿಕೂಟ ಹೊಂದಿರುವ ಶಿವಸೇನೆ, ಮುಂಬರುವ ಚುನಾವಣೆಯಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
 
ಕಳೆದ 2004ರಿಂದ ಶಿವಸೇನೆ ಹೊಣೆಯನ್ನು ಹೊತ್ತಿರುವ ಉದ್ಭವ್ ಠಾಕ್ರೆ, ಸಹೋದರ ರಾಜ್ ಠಾಕ್ರೆಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾರೋ ಎನ್ನುವ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ