ತಮಿಳುನಾಡಿನಲ್ಲಿ ಶಶಿಕಲಾ ಬಣದ ಹೊಸ ಪಕ್ಷ

ಗುರುವಾರ, 15 ಮಾರ್ಚ್ 2018 (10:40 IST)
ಚೆನ್ನೈ: ಎಐಎಡಿಎಂಕೆಯಿಂದ ಪ್ರತ್ಯೇಕಗೊಂಡ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಪರಮಾಪ್ತನ ನೇತೃತ್ವದಲ್ಲಿ ತಮಿಳುನಾಡಿನಲ್ಲಿ ಮತ್ತೊಂದು ಪಕ್ಷ ಅಸ್ಥಿತ್ವಕ್ಕೆ ಬಂದಿದೆ.
 

ಜಯಲಲಿತಾ ಮರಣದ ನಂತರ ಎಐಡಿಎಂಕೆ ಎರಡು ಬಣಗಳಾಗಿ ಚೂರಾಗಿತ್ತು. ಜಯಲಿತಾರಿಂದ ತೆರವಾದ ಕೆಆರ್ ನಗರ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆಲುವು ಕಂಡ ಶಶಿಕಲಾ ಬಂಟ ಟಿಟಿವಿ ದಿನಕರನ್ ಇಂದು ಬೃಹತ್ ಸಮಾವೇಶದಲ್ಲಿ ಹೊಸ ಪಕ್ಷದ ಘೋಷಣೆ ಮಾಡಿದ್ದಾರೆ.

ಅಮ್ಮಾ ಮಕ್ಕಳ ಮುನ್ನೇಟ್ರ ಕಳಗಂ ಎಂದು ಹೊಸ ಪಕ್ಷಕ್ಕೆ ಹೆಸರಿಡಲಾಗಿದೆ. ನೂತನ ಪಕ್ಷ ಚಿಹ್ನೆ, ಧ್ವಜವನ್ನು ಇದೇ ಸಂದರ್ಭದಲ್ಲಿ ದಿನಕರನ್ ಹೊರಬಿಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ