ದಿನಕರನ್ ಅರೆಸ್ಟ್ ಆಗುತ್ತಿದ್ದಂತೆ ಚಿನ್ನಮ್ಮ ಶಶಿಕಲಾ ಫೋಟೋ ಹರಿದು ಹಾಕಿದರು!

ಬುಧವಾರ, 26 ಏಪ್ರಿಲ್ 2017 (11:35 IST)
ಚೆನ್ನೈ: ಚುನಾವಣಾ ಆಯೋಗಕ್ಕೆ ಲಂಚ ನೀಡಿದ ಆರೋಪದಲ್ಲಿ ಆಪ್ತ ಟಿಟಿವಿ ದಿನಕರನ್ ಬಂಧನವಾಗುತ್ತಿದ್ದಂತೆ, ಎಐಎಡಿಎಂಕೆ ಪಕ್ಷದ ಬಾಸ್ ಆಗಿ ಮಿಂಚುತ್ತಿದ್ದ ಶಶಿಕಲಾ ನಟರಾಜನ್ ಮೂಲೆಗುಂಪಾಗಿದ್ದಾರೆ.

 
ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾ ಫೋಟೋಗಳನ್ನು ಪಕ್ಷದ ಕಚೇರಿ ಮುಂಭಾಗದಿಂದ ಹರಿದು ಹಾಕಲಾಗಿದೆ. ಒ ಪನೀರ್ ಸೆಲ್ವಂ ಬಣ ಶಶಿಕಲಾ ಫೋಟೋಗಳನ್ನು ಕಿತ್ತೊಗೆಯುವಂತೆ ಸೂಚಿಸಿತ್ತು.

ಅದರಂತೆ ಶಶಿಕಲಾ ಮತ್ತು ಅವರ ಗುಂಪಿನ ಆಧಿಪತ್ಯ ಎಐಎಡಿಎಂಕೆ ಪಕ್ಷದಲ್ಲಿ ಕೊನೆಗೊಂಡಂತಾಗಿದೆ.  ಶಶಿಕಲಾ ಮತ್ತು ಅವರ ಆಪ್ತ ದಿನಕರನ್ ಅವರನ್ನು ಪಕ್ಷದಿಂದ ಹೊರ ಹಾಕಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ