30 ಕಾರುಗಳಲ್ಲಿ ಬೆಂಬಲಿಗರೊಂದಿಗೆ ಶಾಸಕರ ಭೇಟಿಗೆ ಆಗಮಿಸಿದ ಶಶಿಕಲಾ

ಶನಿವಾರ, 11 ಫೆಬ್ರವರಿ 2017 (16:19 IST)
ಕಾಂಚೀಪುರಂ ಜಿಲ್ಲೆಯ ಕೋವತ್ತೂರ್‌ನ ಗೋಲ್ಡನ್ ಬೇ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಎಐಎಡಿಎಂಕೆ ಶಾಸಕರನ್ನು ಭೇಟಿ ಮಾಡಲು ಸಿಎಂ ಆಕಾಂಕ್ಷಿ ಶಶಿಕಲಾ ನಟರಾಜನ್ ಆಗಮಿಸಿದ್ದಾರೆ.
 
ಇಂದು ತಮ್ಮ ಬೆಂಬಲಿಗರೊಂದಿಗೆ 30 ಕಾರುಗಳಲ್ಲಿ ರೆಸಾರ್ಟ್‌ಗೆ ಆಗಮಿಸಿದ ಶಶಿಕಲಾ, ಶಾಸಕರೊಂದಿಗೆ ಮಾತುಕತೆ ನಡೆಸಿ, ಒಂದು ವೇಳೆ, ರಾಜ್ಯಪಾಲರು ಸರಕಾರ ರಚನೆಗೆ ಅವಕಾಶ ಕೊಡದಿದ್ದಲ್ಲಿ ರಾಷ್ಟ್ರಪತಿಯವರನ್ನು ಭೇಟಿ ಮಾಡಲು ಕೂಡಾ ಸಿದ್ದರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ಅವರಿಗೆ ಪತ್ರ ಬರೆದಿರುವ ಶಶಿಕಲಾ, ಸರಕಾರ ರಚನೆಗೆ ಅಗತ್ಯವಿರುವ ಶಾಸಕರ ಬೆಂಬಲವಿದ್ದು, ಸರಕಾರ ರಚನೆಗೆ ಅವಕಾಶ ಮಾಡಿ ಕೊಡುವಂತೆ ಕೋರಿದ್ದಾರೆ.
 
ಒಂದು ವೇಳೆ, ರಾಜ್ಯಪಾಲರು ಶಾಸಕರ ಪರೇಡ್‌ ನಡೆಸುವಂತೆ ಆದೇಶಿಸಿದಲ್ಲಿ ಸಿದ್ದರಾಗುವಂತೆ ಶಾಸಕರಿಗೆ ಶಶಿಕಲಾ ಸಲಹೆ ನೀಡಿದ್ದಾರೆ ಎನ್ನಲಾಗಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ