ಬೆಂಬಲಿಗ ಶಾಸಕರ ಪರೇಡ್ ಮಾಡಲು ಅವಕಾಶ ನೀಡಿ: ಶಶಿಕಲಾ

ಶನಿವಾರ, 11 ಫೆಬ್ರವರಿ 2017 (13:37 IST)
ಬೆಂಬಲಿಗ ಶಾಸಕರ ಪರೇಡ್ ಮಾಡಲು ಅವಕಾಶ ನೀಡಿ ಎಂದು ಎಐಎಡಿಎಂಕೆ ನಾಯಕಿ ಶಶಿಕಲಾ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
 
ತಮ್ಮ ಬೆಂಬಲಿಗ ಶಾಸಕರು ಪರೇಡ್ ಮಾಡಲು ಸಿದ್ದರಾಗಿದ್ದಾರೆ. ಅವರ ಸಂಖ್ಯೆಯನ್ನು ನೋಡಿ ನಿರ್ಧಾರ ತೆಗೆದುಕೊಂಡು ನನಗೆ ಕೂಡಲೇ ಸರಕಾರ ರಚಿಸಲು ಆಹ್ವಾನ ನೀಡಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
 
ಸುಪ್ರೀಂಕೋರ್ಟ್ ತೀರ್ಪು ಬರುವವರೆಗೆ ಕಾಯುವಂತೆ ಶಶಿಕಲಾಗೆ ರಾಜ್ಯಪಾಲ ಸಿ. ವಿದ್ಯಾಸಾಗರ್ ರಾವ್ ಹೇಳಿರುವುದು ಶಶಿಕಲಾ ಬೆಂಬಲಿಗರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. 
 
ಪನ್ನೀರ್ ಸೆಲ್ವಂಗೆ ಹೆಚ್ಚುತ್ತಿರುವ ಬೆಂಬಲ
 
ಹಂಗಾಮಿ ಮುಖ್ಯಮಂತ್ರಿ ಪನ್ನೀರ್‌ಸೆಲ್ವಂಗೆ ದಿನದಿಂದ ದಿನಕ್ಕೆ ಹೆಚ್ಚು ಬೆಂಬಲ ದೊರೆಯುತ್ತಿದ್ದು ಇದೀಗ ಶಿಕ್ಷಣ ಖಾತೆ ಸಚಿವ ಪಾಂಡಿಯರಾಜನ್ ಸೆಲ್ವಂ ಅವರಿಗೆ ಬೆಂಬಲ ಘೋಷಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ