ಸ್ಮೃತಿ ಇರಾನಿ ಅಮಿತಾಭ್ ಬಚ್ಚನ್ ಆಗಲು ಹೊರಡ್ತಾರೆ, ಕೊನೆಗೆ ಆಗೋದು ವಿಲನ್!
‘ಸ್ಮೃತಿ ಇರಾನಿಯ ಮನದಲ್ಲಿರುವ ಸೋಲಿನ ಭಯ ನಮಗೆ ಅರ್ಥವಾಗುತ್ತದೆ. ಆಕೆಗೆ ಇದುವರೆಗೆ ಒಂದೇ ಒಂದು ಪಂಚಾಯತ್ ಚುನಾವಣೆ ಗೆಲ್ಲಲು ಸಾಧ್ಯವಾಗಿಲ್ಲ. ಈಗ ಮೂರನೇ ಸೋಲಿಗೆ ಸಿದ್ಧತೆ ನಡೆಸಿದ್ದಾರೆ. ಹಾಗಿದ್ದರೂ ಅವರಿಗೆ ರಾಜ್ಯ ಸಭೆ ಟಿಕೆಟ್ ನೀಡಿ ಮೋದಿ ಗೆಲ್ಲಿಸುತ್ತಾರೆ. ಹಾಗೆ ಭಯ ಬೇಕಾಗಿಲ್ಲ. ಆಕೆ ಹೆಚ್ಚಾಗಿ ಕೋಪದಲ್ಲಿರುತ್ತಾರೆ, ಅಮಿತಾಬ್ ಬಚ್ಚನ್ ರನ್ನು ಅನುಕರಿಸಲು ಹೋಗುತ್ತಾರೆ. ಆದರೆ ವಿಪರ್ಯಾಸವೆಂದರೆ ಕತೆಯಲ್ಲಿನ ಖಳನಾಯಕಿಯಾಗುತ್ತಾರೆ’ ಎಂದು ರಣದೀಪ್ ವ್ಯಂಗ್ಯ ಮಾಡಿದ್ದಾರೆ.