ತಂದೆ ಹೊಸ ಫೋನ್ ಕೊಡಿಸಲಿಲ್ಲವೆಂದು ಮಗ ಇಂಥಾ ಕೆಲಸ ಮಾಡೋದಾ?!

ಸೋಮವಾರ, 4 ಜನವರಿ 2021 (10:46 IST)
ಕಾನ್ಪುರ: ತಂದೆ ಹೊಸ ಫೋನ್ ಕೊಡಿಸಲಿಲ್ಲವೆಂಬ ಬೇಸರದಲ್ಲಿ 16 ವರ್ಷದ ಅಪ್ರಾಪ್ತ ಬಾಲಕ ನೇಣಿಗೆ ಶರಣಾದ ಘಟನೆ ಕಾನ್ಪುರದಲ್ಲಿ ನಡೆದಿದೆ.


ಮೃತ ಬಾಲಕ 12 ನೇ ತರಗತಿಯಲ್ಲಿ ಓದುತ್ತಿದ್ದ. ಹಣಕಾಸಿನ ಅಡಚಣೆಯಿರುವುದರಿಂದ ಹೊಸ ಫೋನ್ ಕೊಡಿಸಲು ತಂದೆ ಒಪ್ಪಿರಲಿಲ್ಲ. ಕೆಲವು ದಿನಗಳ ಬಳಿಕ ಕೊಡಿಸುವುದಾಗಿ ತಂದೆ ಹೇಳಿದ್ದರು. ಆದರೆ ಇದಕ್ಕೆ ಒಪ್ಪದ ಮಗ ಆಕ್ರೋಶದಲ್ಲಿ ತನ್ನ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ