ಗಣರಾಜ್ಯೋತ್ಸವದ ಹಿನ್ನೆಲೆ ಭದ್ರತಾ ಪಡೆಗೆ ದಕ್ಕಿದ ಯಶಸ್ಸು; ಮೂವರು ಶಂಕಿತರು ವಶ

ಶುಕ್ರವಾರ, 26 ಜನವರಿ 2018 (07:37 IST)
ನವದೆಹಲಿ: ಇಂದು ದೇಶಾದ್ಯಂತ 69ನೇ ಗಣರಾಜ್ಯೋತ್ಸವದ ಸಂಭ್ರಮ. ಉಗ್ರರ ದಾಳಿ ಭೀತಿಯಿಂದಾಗಿ ದೆಹಲಿಯಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮವನ್ನು ತೆಗೆದುಕೊಳ್ಳಲಾಗಿತ್ತು. ಈ ಹಿನ್ನೆಲೆ ಭದ್ರತಾ ಪಡೆಗಳಿಗೆ ಭಾರೀ ಯಶಸ್ಸೊಂದು ದಕ್ಕಿದೆ. ಇಬ್ಬರು ಅರಬ್ ನಾಗರಿಕರು ಸೇರಿ ಮೂವರು ಶಂಕಿತರನ್ನು ವಶ ಪಡಿಸಿಕೊಂಡಿದ್ದಾರೆ.


ರಾಜಸ್ಥಾನದ ಜೈಸಲ್ಮೇರ್ ನಲ್ಲಿ ಸೌದಿ ಅರೇಬಿಯಾದ ಇಬ್ಬರು, ಹೈದರಾಬಾದ ಮೂಲದ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಶಂಕಿತ ಆರೋಪಿಗಳನ್ನು ಭದ್ರತಾ ಪಡೆ ವಿಚಾರಣೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ