ಸಂಸತ್ತಿಗೆ ಬಂದ ದಿನವೇ ಮಲ್ಲಿಕಾರ್ಜುನ ಖರ್ಗೆ ಬಾಯಿ ಬಂದ್ ಮಾಡಿದ ಸುಷ್ಮಾ ಸ್ವರಾಜ್

ಗುರುವಾರ, 16 ಮಾರ್ಚ್ 2017 (10:35 IST)
ನವದೆಹಲಿ:  ಮೂತ್ರಪಿಂಡ ಸಮಸ್ಯೆಯಿಂದ ಚೇತರಿಸಿಕೊಂಡು ಸಂಸತ್ತಿಗೆ ಆಗಮಿಸಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮೊದಲ ದಿನವೇ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಬೆಂಡೆತ್ತುವ ಕೆಲಸ ಮಾಡಿದ್ದಾರೆ.

 
ಅಮೆರಿಕಾದಲ್ಲಿ ಭಾರತೀಯರ ಮೇಲಾದ ದಾಳಿಗಳ ಬಗ್ಗೆ ಕೇಂದ್ರ ಸರ್ಕಾರ ಮೌನ ವಹಿಸಿದೆ ಎನ್ನುವ ಖರ್ಗೆ ಆರೋಪವನ್ನು ಖಂಡಿಸಿದ ಸುಷ್ಮಾ, ಈಗಾಗಲೇ ಕೇಂದ್ರ ಸರ್ಕಾರ ಈ ವಿವಾದವನ್ನು ಅಮೆರಿಕಾದ ಉನ್ನತ ಮಟ್ಟಕ್ಕೆ ಕೊಂಡೊಯ್ದಿದೆ ಎಂದಿದ್ದಾರೆ.

“ನಾವು ಸುಮ್ಮನಿದ್ದೇವೆ ಎನ್ನುವುದು ಸುಳ್ಳು. ನಮ್ಮ ಸರ್ಕಾರ ಕೆಲಸ ಮಾಡುವ ವೈಖರಿಯೇ ಹಾಗೆ. ನಾವು ಮಾಡಿದ್ದನ್ನು ಹೇಳಿಕೊಂಡು ತಿರುಗುವುದಿಲ್ಲ. ಭಾರತೀಯ ವಿದೇಶದಲ್ಲೇ ಕಷ್ಟಕ್ಕೆ ಸಿಲುಕಿದರೂ, 24 ಗಂಟೆಯೊಳಗೆ ಸಮಸ್ಯೆ ಬಗೆ ಹರಿಸುತ್ತೇವೆ” ಎಂದು ಸುಷ್ಮಾ ಖರ್ಗೆಗೆ ತಿರುಗೇಟು ನೀಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ