ಜೆಡಿಎಸ್ ನಾಯಕರ ಭೀಕರ ಸಾವು; ಸಿಎಂಗೆ ಭಾರೀ ಆಘಾತ

ಸೋಮವಾರ, 22 ಏಪ್ರಿಲ್ 2019 (15:16 IST)
ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ನಾಯಕರಿಗೆ ಆದ ಗತಿ ಕಂಡು ಸಿಎಂಗೆ ಭಾರೀ ಆಘಾತವಾಗಿದೆ.

ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ರಾಜ್ಯದ ಜೆಡಿಎಸ್ ನ ಐವರು ಪ್ರಮುಖ ಮುಖಂಡರು ಬಲಿಯಾಗಿದ್ದಾರೆ.

ಶಾಂಗ್ರಿಲಾ ಹೋಟೆಲ್ ನಲ್ಲಿದ್ದ ಜೆಡಿಎಸ್ ನ ಒಟ್ಟು 7 ಜನ ಪ್ರಮುಖರಲ್ಲಿ 5 ಜನರು ಸಾವನ್ನಪ್ಪಿದ್ದಾರೆ. ಹನುಮಂತರಾಯಪ್ಪ, ಶಿವಕುಮಾರ, ರಂಗಪ್ಪ, ರಮೇಶ್, ಲಕ್ಷ್ಮೀನಾರಾಯಣ ಮೃತಪಟ್ಟವರಾಗಿದ್ದಾರೆ.

ಭಯೋತ್ಪಾದಕರ ದಾಳಿ ಜೆಡಿಎಸ್ ಮುಖಂಡರು ಸಾವನ್ನಪ್ಪಿರುವುದಕ್ಕೆ ನೋವಾಗಿದೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವಿಟ್ ಮಾಡಿದ್ದಾರೆ. ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಸಿಎಂ ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ