ವೀರ ಚಕ್ರ ಪ್ರಶಸ್ತಿಗೆ ಭಾಜನರಾದ ವೀರ ಯೋಧ ಅಭಿನಂದನ್​ ವರ್ತಮಾನ್

ಗುರುವಾರ, 15 ಆಗಸ್ಟ್ 2019 (10:44 IST)
ನವದೆಹಲಿ : ಪುಲ್ವಾಮ ದಾಳಿಯ ವೇಳೆ ಪಾಕ್ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ವೀರ ಯೋಧ ವಾಯುಪಡೆ ವಿಂಗ್​ ಕಮಾಂಡರ್​ ಅಭಿನಂದನ್​ ವರ್ತಮಾನ್​​ ಅವರು  ವೀರ ಚಕ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.




73ನೇ ಸ್ವಾತಂತ್ರ್ಯ ದಿನವಾದ ಇಂದು ರಾಷ್ಟ್ರಪತಿ ರಾಮನಾಥ್​ ಕೋವಿಂದ್  ಅವರು ವೀರ ಯೋಧ ಅಭಿನಂದನ್​ ವರ್ತಮಾನ್​​ ಅವರಿಗೆ ವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.


ಕಳೆದ ಫೆಬ್ರವರಿಯಲ್ಲಿ ಪುಲ್ವಾಮ ದಾಳಿ ಬಳಿಕ ಭಾರತದ ಗಡಿ ಪ್ರವೇಶಿಸಲು ಮುಂದಾದ ಪಾಕ್ ಯುದ್ಧ ವಿಮಾನವನ್ನು ಹೊಡೆದುರುಳಿಸಿ ಪಾಕ್ ವಶರಾದ ಅಭಿನಂದನ್​ ವರ್ತಮಾನ್​​ ಅವರು  ಪಾಕಿಸ್ತಾನದವರು ನೀಡಿದ ಮಾನಸಿಕ ಹಿಂಸೆ ಸಹಿಸಿಕೊಂಡು ಯಾವುದೇ ಮಾಹಿತಿಯನ್ನು ಬಿಟ್ಟುಕೊಡದೆ ಮತ್ತೆ ತಾಯ್ನಾಡಿಗೆ ಮರಳಿದ್ದರು. ಈ ವೀರ ಯೋಧನ ಸಾಹಸವನ್ನು ಇಡೀ ದೇಶವೇ ಮೆಚ್ಚಿ ಕೊಂಡಾಡಿತ್ತು.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ