ನಾಯಿಗೆ ಕಲ್ಲು ಹೊಡೆದದ್ದಕ್ಕೆ ಗುಂಡು ಹಾರಿಸಿಯೇ ಬಿಟ್ಟ ಮಾಲೀಕ. ಆಮೇಲೆ ಆಗಿದ್ದೇನು ಗೊತ್ತಾ?

ಮಂಗಳವಾರ, 8 ಜನವರಿ 2019 (06:48 IST)
ನವದೆಹಲಿ : ನಾಯಿಗೆ ಕಲ್ಲು ಹೊಡೆದ ವ್ಯಕ್ತಿಯನ್ನು ಮಾಲೀಕ ಹಾಡಹಗಲೇ ಗುಂಡು ಹಾರಿಸಿ  ಕೊಲೆ ಮಾಡಿದ  ಅಮಾನವೀಯ ಘಟನೆ ನವದೆಹಲಿಯ ವೆಲ್‍ ಕಮ್ ಕಾಲೊನಿಯಲ್ಲಿ ನಡೆದಿದೆ.


ಅಫಾಖ್(30) ಮೃತ ದುರ್ದೈವಿ. ಈತ ವೆಲ್ ಕಮ್ ಕಾಲೋನಿಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅವರನ್ನು ನೋಡಿ ನಾಯಿಯೊಂದು ಜೋರಾಗಿ ಬೊಗಳಿದೆ. ಅಲ್ಲದೇ ಕಚ್ಚಲು ಕೂಡ ಪ್ರಯತ್ನಿಸುತ್ತಿತ್ತು. ಇದರಿಂದ ಭಯಗೊಂಡ ಅಫಾಖ್ ತನ್ನ ರಕ್ಷಣೆಗಾಗಿ ಅಲ್ಲೇ ಇದ್ದ ಕಲ್ಲನ್ನು ಎತ್ತಿ ನಾಯಿ ಕಡೆ ಎಸದಿದ್ದಾರೆ.


ಇದರಿಂದ ಕೋಪಗೊಂಡ ನಾಯಿಯ ಮಾಲೀಕ ಪಿಸ್ತೂಲ್ ನಿಂದ ನೇರವಾಗಿ ಅಫಾಖ್ ಮೇಲೆ ಗುಂಡು ಹಾರಿಸಿದ್ದಾನೆ. ಪರಿಣಾಮ ಅಫ್ತಾಖ್ ಮೃತಪಟ್ಟಿದ್ದಾನೆ. ಘಟನೆಯ ಬಳಿಕ ಮಾಲೀಕ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ