ಈ ಕಾರಣಕ್ಕೆ ಬಸ್ಸಿನಲ್ಲಿ ತೆರಳುತ್ತಿದ್ದ ಹುಡುಗಿಯ ಗಂಟಲು ಕತ್ತರಿಸಿದ ಯುವಕ

ಗುರುವಾರ, 17 ಡಿಸೆಂಬರ್ 2020 (06:49 IST)
ತಿರುಚ್ಚಿ : ಮದುವೆ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಬಸ್ಸಿನಲ್ಲಿ ಯುವಕನೊಬ್ಬ 20 ವರ್ಷದ ಕಾಲೇಜು ವಿದ್ಯಾರ್ಥಿನಿಯ ಗಂಟಲು ಕತ್ತರಿಸಿದ ಘಟನೆ ತಿರುವೈಯಾರು ಬಳಿಯ ನಾಡುಕಾವೇರಿಯ ಅರಸಮರ ಬೀದಿಯಲ್ಲಿ ನಡೆದಿದೆ.

ವಿದ್ಯಾರ್ಥಿನಿ ಹಾಗು ಆರೋಪಿಯ ನಡುವೆ ಸ್ನೇಹವಿತ್ತು, ಹಾಗೇ ಇವರಿಬ್ಬರು ಕೆಲಕಾಲದಿಂದ ದೂರವಿದ್ದರು. ಆದರೆ ಹುಡುಗಿ ಬಸ್ಸಿನಲ್ಲಿ ಕಾಲೇಜಿಗೆ ತೆರಳುತ್ತಿದ್ದಾಗ ಮದುವೆಯಾಗುವಂತೆ ಯುವಕ ಕಿರುಕುಳ ನೀಡುತ್ತಿದ್ದ. ಇದನ್ನು ಹುಡುಗಿ ನಿರಾಕರಿಸಿದಾಗ ಚಾಕುವಿನಿಂದ ಅವಳ ಗಂಟಲು ಕತ್ತರಿಸಿ ಬಸ್ಸಿನಿಂದ ಜಿಗಿಯಲು ಯತ್ನಸಿದಾಗ ಪ್ರಯಾಣಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. 

ಹುಡುಗಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ