ಬಿಂದಿ ಹಾಕಿದ್ದಕ್ಕೆ ಈ ಹುಡುಗಿಗೆ ಅದೆಂಥಾ ಶಿಕ್ಷೆ ಗೊತ್ತಾ?!

ಶನಿವಾರ, 7 ಜುಲೈ 2018 (11:29 IST)
ತಿರುವನಂತಪುರ: ಬಿಂದಿ ಹಾಕಿದ್ದಕ್ಕೆ ಬಾಲಕಿಯೊಬ್ಬಳನ್ನು ಮದರಸಾದಿಂದ ಹೊರಗಟ್ಟಿದ ಘಟನೆ ಕೇರಳದಲ್ಲಿ ನಡೆದಿದೆ. ಈ ವಿಚಾರವನ್ನು ಬಾಲಕಿಯ ತಂದೆ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ.
 

ಹಣೆಗೆ ಗಂಧದ ಬೊಟ್ಟು ತೊಟ್ಟು ಮದರಸಾಕ್ಕೆ ಹೋದ ತಪ್ಪಿಗೆ ಬಾಲಕಿಯನ್ನು ಹೊರ ಹಾಕಲಾಗಿದೆ ಎಂದು ಬಾಲಕಿಯ ತಂದೆ ಉಮ್ಮರ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು ಈ ಪೋಸ್ಟ್ ಈಗ ವೈರಲ್ ಆಗಿದೆ.

ಶಾರ್ಟ್ ಫಿಲಂ ಒಂದರಲ್ಲಿ ನಟಿಸುತ್ತಿದ್ದ ಕಾರಣಕ್ಕೆ ಬಾಲಕಿ ಬೊಟ್ಟು ತೊಟ್ಟುಕೊಂಡು ಮದರಸಾಕ್ಕೆ ಹೋಗಿದ್ದಳು. 10 ವರ್ಷದ ಬಾಲಕಿಯ ತಂದೆ ತನ್ನ ಮಗಳ ಪ್ರತಿಭೆ ಬಗ್ಗೆ ಬರೆದುಕೊಂಡಿದ್ದು, ಅವಳ ಪ್ರತಿಭೆಗೆ ಬೆಲೆ ಕೊಟ್ಟಾದರೂ ಮದರಸಾದಲ್ಲಿರುವವರು ಕರುಣೆ ತೋರಲಿಲ್ಲ ಎಂದು ಅಲವತ್ತುಗೈದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ