ಕೇವಲ 5 ನೇ ತರಗತಿಯವರೆಗೆ ಓದಿರುವ ಸಕ್ರೆ ಎಂಬ ಬಡ ಟೀ ವ್ಯಾಪಾರಿ ವ್ಯಕ್ತಿ ದೇಶದ ಅತಿದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆಯನ್ನು ಹೊಂದಿರುವ, ಸರಕಾರಿ ಒಡೆತನದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿರುದ್ಧ ಪ್ರಕರಣವನ್ನು ದಾಖಲಿಸಿ, ನ್ಯಾಯಕ್ಕಾಗಿ ಹೋರಾಡಿ ಗೆಲುವು ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.
ರಾಷ್ಟ್ರೀಯ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯ ಪ್ರಕಾರ ಆತನ ಖಾತೆಯಲ್ಲಿ 20,000 ರೂಪಾಯಿಗಳಿದ್ದು, ಅದರಲ್ಲಿ ಆತ 10,800 ರೂಪಾಯಿಗಳನ್ನು ತೆಗೆದಿದ್ದ. ಮತ್ತೊಮ್ಮೆ ಹಣ ತೆಗೆಯಲು ಹೋದಾಗ ಆತನ ಖಾತೆಯಲ್ಲಿ ಶೂನ್ಯ ಮೊತ್ತ ಕಾಣಿಸುತ್ತಿತ್ತು. ಇದರಿಂದ ದಂಗಾಗಿ ಹೋದ ಬಡ ಸಕ್ರೆ ಹತ್ತಿರದ ಎಸ್ಬಿಐ ಖಾತೆಗೆ ಹೋಗಿ ತನ್ನ ಸಮಸ್ಯೆಯ ಬಗ್ಗೆ ದೂರಿದ. ಆದರೆ ಸಮಸ್ಯೆಗೆ ಸ್ಪಂದಿಸದೇ ನಿರ್ಲಕ್ಷ ತೋರಿದ ಅಧಿಕಾರಿಗಳು ಆತನದೇ ತಪ್ಪು ಎಂಬಂತೆ ನಡೆದುಕೊಂಡರು.