ಕೇರಳದ ಪಾಲಕ್ಕಾಡ್ ನಲ್ಲಿ ಮೂವರು ನಕ್ಸಲರನ್ನು ಹತ್ಯೆಗೈದ ಪೊಲೀಸರು

ಮಂಗಳವಾರ, 29 ಅಕ್ಟೋಬರ್ 2019 (11:46 IST)
ಕೇರಳ : ಕೇರಳದ ಪಾಲಕ್ಕಾಡ್  ಕಾಡಿನಲ್ಲಿ ಕರ್ನಾಟಕದ ಮೂಲದ ಇಬ್ಬರು ಸೇರಿ ಮೂವರು ನಕ್ಸಲರನ್ನು ಪೊಲೀಸರು ಹತ್ಯೆ ಮಾಡಿದ್ದಾರೆ.



ಕೇರಳದ ಪಾಲಕ್ಕಾಡ್  ನಲ್ಲಿ ಪೊಲೀಸರು ಕೂಂಬಿಂಗ್ ನಡೆಸುತ್ತಿದ್ದ ವೇಳೆ ಮೂವರು ನಕ್ಸಲರು ದಾಳಿ ಮಾಡಿದ ಹಿನ್ನಲೆಯಲ್ಲಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಇದರಲ್ಲಿ ಕರ್ನಾಟಕದ ಚಿಕ್ಕಮಗಳೂರು ಮೂಲದ ಶ್ರೀಮತಿ ಹಾಗೂ ಸುರೇಶ್ ಕುಮಾರ್ ಸೇರಿ ಮೂವರು ಸಾವನ್ನಪ್ಪಿದ್ದಾರೆ.

 

ಚಿಕ್ಕಮಗಳೂರು ಮೂಲದ ಶ್ರೀಮತಿ 2008ರಲ್ಲೇ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, ಆಕೆಯ ಮೇಲೆ 10 ಕೇಸುಗಳು ದಾಖಲಾಗಿದ್ದವು. ಹಾಗೇ ಮೂಡಿಗೆರೆ ಅಂಗಡಿ ಗ್ರಾಮದವನಾಗಿದ್ದ ಸುರೇಶ್ ಕುಮಾರ್ 2004ರಲ್ಲಿ ನಕ್ಸಲ್ ಗೆ ಸೇರ್ಪಡೆಯಾಗಿದ್ದು, ಈತನ ಮೇಲೆ 40 ಕೇಸ್ ಗಳು ದಾಖಲಾಗಿದೆ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ