ಟಿಪ್ಸ್ ಪಡೆಯುತ್ತಿದ್ದ 243 ಕ್ಷೌರಿಕರಿಗೆ ಟಿಟಿಡಿ ಗೇಟ್ ಪಾಸ್
ಹೈದರಾಬಾದ್: ದೇಶದ ಅತ್ಯಂತ ಶ್ರೀಮಂತ ದೇವಾಲಯ ತಿರುಪತಿಯಲ್ಲಿ ಭಕ್ತರಿಗೆ ಕ್ಷೌರ ಮಾಡಿಸಿದ್ದಕ್ಕೆ ಹಣ ಪಡೆಯುತ್ತಿದ್ದ 243 ಕ್ಷೌರಿಕರನ್ನು ಟಿಟಿಡಿ ಆಡಳಿತ ಮಂಡಳಿ ನೊಟೀಸ್ ನೀಡಿ ವಜಾ ಮಾಡಿದೆ. ಈ ಕ್ರಮದ ವಿರುದ್ಧ ಕ್ಷೌರಿಕರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಸದ್ಯ ವಜಾಗೊಂಡ ಕ್ಷೌರಿಕರು, ಟಿಟಿಡಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದು, ಜೀವನೋಪಾಯಕ್ಕಿದ್ದ ಉದ್ಯೋಗದಿಂದ ವಜಾ ಮಾಡಿರುವುದರಿಂದ ದಿಕ್ಕು ತೋಚದಂತಾಗಿದೆ ಎಂದು ಆಗ್ರಹಿಸಿದ್ದಾರೆ.