ಸಮಾರಂಭದ ಕುರಿತು ಮಾಹಿತಿ ಸಂಗ್ರಹಿಸುವಂತೆ ಸೇನೆ ಕೋರಿತ್ತು. ಅದರಂತೆ, ರಾಷ್ಟ್ರಗೀತೆ ಹಾಡುವಾಗ ನಾನು ಸಮಾರಂಭದ ವಿವರಗಳನ್ನು ಕಲೆಹಾಕುವಲ್ಲಿ ನಿರತನಾಗಿದ್ದೆ. ರಾಷ್ಟ್ರಗೀತೆ ಮುಕ್ತಾಯವಾದ ನಂತರ ಸೇನಾಧಿಕಾರಿಯೊಬ್ಬರು ನಮ್ಮ ಬಳಿಗೆ ಬಂದು, ರಾಷ್ಟ್ರಗೀತೆ ಹಾಡುವಾಗ ಯಾಕೆ ಎದ್ದು ನಿಲ್ಲಲಿಲ್ಲ ಎಂದು ಪ್ರಶ್ನಿಸಿ, ನಿಮ್ಮಂತಹ ವ್ಯಕ್ತಿಗಳ ಅಗತ್ಯ ನಮಗಿಲ್ಲ. ಕೂಡಲೇ ಕಾರ್ಯಕ್ರಮದಿಂದ ತೆರಳಿ ಎಂದು ಗುಡುಗಿದ್ದಾಗಿ ಕಾಶ್ಮಿರ್ ರೀಡರ್ ಪತ್ರಿಕೆಯ ವರದಿಗಾರ ಜುನೈದ್ ಬಝಾಝ್ ತಿಳಿಸಿದ್ದಾರೆ.