ಸ್ವಾತಂತ್ರ್ಯೋತ್ಸವ ದಿನದಂದು ಭದ್ರತಾ ಅಧಿಕಾರಿಯಿಂದ ಶೂ ಲೇಸ್ ಕಟ್ಟಿಸಿಕೊಂಡು, ಖಂಡನೆಗೊಳಗಾದಾಗ 'ನಾನು ವಿಐಪಿ' ಎಂದು ಕೃತ್ಯವನ್ನು ಸಮರ್ಥಿಸಿಕೊಂಡಿದ್ದ ಒಡಿಶಾ ಸಚಿವ ಜೋಗೇಂದ್ರ ಬೆಹೆರಾ ಈಗ ರಾಗ ಬದಲಿಸಿದ್ದಾರೆ. ನನಗೆ ಆರೋಗ್ಯ ಸಮಸ್ಯೆ ಇದ್ದು, ಬಾಗಲು ಕಷ್ಟವಾಗುತ್ತಿದ್ದರಿಂದ ಭದ್ರತಾ ಅಧಿಕಾರಿ ಬಳಿ ಶೂ ಲೇಸ್ ಕಟ್ಟಿಕೊಂಡೆ ಎಂದು ಅವರು ಹೊಸ ಸಮರ್ಥನೆಯನ್ನು ನೀಡಿದ್ದಾರೆ.
ಈ ದೃಶ್ಯಾವಳಿಯನ್ನು ಸ್ಥಳೀಯ ವಾಹಿನಿಗಳು ಪ್ರಸಾರ ಮಾಡಿದಾಗ ಪ್ರತಿಕ್ರಿಯಿಸಿದ್ದ ಸಚಿವರು, ನಾನು ವಿಐಪಿ, ಧ್ವಜಾರೋಹಣ ಮಾಡಿದ್ದೇನೆ. ಇದನ್ನು ಭದ್ರತಾ ಅಧಿಕಾರಿ ಮಾಡಿಲ್ಲ ಎಂದು ಅಸಂಬದ್ಧವಾಗಿ ಉತ್ತರಿಸಿದ್ದರು.