Viral video: ಮಾಂಗಲ್ಯ ಸರ ತೆಗೆಯಲು ಬಂದ ವೃದ್ಧ ದಂಪತಿ: ನೆಟ್ಟಿಗರ ಮನಗೆದ್ದ ಅಂಗಡಿ ಮಾಲಿಕ
ಆದರೆ ಪ್ರಪಂಚ ಜ್ಞಾನವೇ ಇಲ್ಲದ ದಂಪತಿಯ ಮುಗ್ಧ ಮಾತುಗಳು ಅಂಗಡಿ ಮಾಲಿಕನ ಹೃದಯ ಗೆದ್ದಿದೆ. ಅವರ ಬಳಿ ಬಂದು ವಿಚಾರಿಸಿಕೊಂಡ ಅಂಗಡಿ ಮಾಲಿಕ ನಿಮ್ಮ ಬಳಿ ಎಷ್ಟು ಹಣವಿದೆ ಎಂದು ಕೇಳುತ್ತಾರೆ. ವೃದ್ಧ ತನ್ನ ಚೀಲದಲ್ಲಿದ್ದ ಚಿಲ್ಲರೆ ಹಣವೆಲ್ಲಾ ಟೇಬಲ್ ಮೇಲೆ ಹರಡಿದ್ದಾರೆ. ಅಂಗಡಿ ಮಾಲಿಕ ಅದನ್ನೆಲ್ಲಾ ಒಂದೊಂದಾಗಿ ಎಣಿಸಿ ಬಳಿಕ ಈ ಹಣ ನಿಮ್ಮಲ್ಲೇ ಇರಲಿ ಎಂದು ವಾಪಸ್ ಮಾಡುತ್ತಾನೆ. ಮುಗ್ಧ ವೃದ್ಧ ದಂಪತಿ ಅವಾಕ್ಕಾಗಿ ನೋಡುವಾಗ ಹಣದ ಬದಲು ಇದು ನಿಮಗೆ ಎಂದು ಮಾಂಗಲ್ಯ ಸರವೊಂದನ್ನು ಉಚಿತವಾಗಿ ಉಡುಗೊರೆಯಾಗಿ ನೀಡಿದ್ದಾರೆ.
ಆದರೆ ವೃದ್ಧ ದಂಪತಿ ಉಚಿತವಾಗಿ ತೆಗೆದುಕೊಳ್ಳಲು ಹಿಂದೆ-ಮುಂದೆ ನೋಡಿದ್ದಾರೆ. ಅದಕ್ಕೆ ಅಂಗಡಿ ಮಾಲಿಕ ವೃದ್ಧರಿಂದ 20 ರೂ. ನೋಟು ತೆಗೆದುಕೊಂಡು ಇದು ಪಾಂಡುರಂಗನ ಆಶೀರ್ವಾದ ಎಂದುಕೊಳ್ಳುತ್ತೇನೆ ಎಂದಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.