ಕುಸ್ತಿಪಟುಗಳು ಸಾಮಾನ್ಯವಾಗಿ ಸಿಡುಕಿನ ಸ್ವಭಾವವನ್ನು ಹೊಂದಿರುತ್ತಾರೆ. ಆಖಾಡದಲ್ಲಿರುವಾಗ ಅವರನ್ನು ಕೆಣಕಿದರೆ, ಮುಂದಿರುವವರು ಯಾರು ಎಂಬುದರ ಕಡೆ ಕೂಡ ಅವರು ಗಮನ ನೀಡಲಾರರು. ಹೀಗಾಗಿ ಅಂತಹ ಪ್ರಮಾದವನ್ನು ಮಾಡುವ ಮುನ್ನ ಎಚ್ಚರವಿರಬೇಕು. ಆದರೆ ಪಾಪ ಲಾಲು ಪ್ರಸಾದ್ ನೇತೃತ್ವದ ಆರ್ಜೆಡಿ ಪಕ್ಷದ ಈ ಶಾಸಕನಿಗೆ ಅದು ಗೊತ್ತರಲಿಕ್ಕಿಲ್ಲ. ಅಥವಾ ತಾನು ಶಾಸಕ ಎಂಬ ದರ್ಪ ಆತನಲ್ಲಿತ್ತಿರಬೇಕು. ಹೀಗಾಗಿ ಕುಸ್ತಿಪಟುವನ್ನು ಕೆಣಕಿದ್ದಾನೆ. ಪರಿಣಾಮ? ಪರಿಣಾಮವೇನಾಯಿತು ಎಂದು ತಿಳಿಯಲು ಮುಂದೆ ಓದಿ ಮತ್ತು ವಿಡಿಯೋ ನೋಡಿ.
ಭೋಜ್ಪುರ ಜಿಲ್ಲೆಯ 45ನೇ ಸಂಸ್ಥಾಪನಾ ದಿನದ ಸ್ಮರಣಾರ್ಥ ಅರಾದಲ್ಲಿ ಗುರುವಾರ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಈ ಪಂದ್ಯ ನೋಡಲು ಬಂದಿದ್ದ ಸಂದೇಶ್ ವಿಧಾನಸಭಾ ಕ್ಷೇತ್ರದ ಶಾಸಕ ಅರುಣ್ ಯಾದವ್ ಪಂದ್ಯವನ್ನು ನೋಡುತ್ತ ಸುಮ್ಮನಿರದೆ 19 ವರ್ಷದ ಯುವ ಕುಸ್ತಿ ಪಟು ರಾಜ್ ಕುಮಾರ್ ಪಾಸ್ವಾನ್ನಿಗೆ ಹಾಗೆ ಮಾಡು ಹೀಗೆ ಮಾಡು ಎಂದು ಒಂದಾದ ಮೇಲೆ ಒಂದರಂತೆ ಪುಕ್ಕಟ್ಟೆ ಸಲಹೆ ನೀಡುತ್ತ ತಲೆ ನೋವು ತರಿಸಿದ್ದಾನೆ.
'ಜಟ್ಟಿ ಜಾರಿ ಬಿದ್ರು ಮೀಸೆ ಮಣ್ಣು ಆಗಲಿಲ್ಲ', ಎನ್ನುವಂತೆ ಅಪಮಾನವಾದರೂ ಅದನ್ನು ತೋರ್ಪಡಿಸದ ಶಾಸಕ, ನನ್ನ ಕಾಲದಲ್ಲಿ (1981- 1990) ನಾನು ಅತ್ಯುತ್ತಮ ಕುಸ್ತಿಪಟುವಾಗಿದ್ದೆ. ನಾನು ಆತನಿಗೆ ಕೆಲವು ಕುಸ್ತಿ ನಡೆಗಳನ್ನು ತೋರಿಸುತ್ತಿದ್ದೆ. ಎದುರಾಳಿಯನ್ನು ಹೇಗೆ ಉರುಳಿಸುವುದು ಎಂಬುದನ್ನು ತೋರಿಸುವಾಗ ಸಮತೋಲನ ತಪ್ಪಿ ಬಿದ್ದುಬಿಟ್ಟೆ. ಸುದ್ದಿವಾಹಿನಿಗಳು ಸಂಪೂರ್ಣ ಪ್ರಸಂಗವನ್ನು ತಿರುಚಿ ತೋರಿಸಿದವು ಎಂದು ತಾವು ಮಣ್ಣುಮುಕ್ಕಿಯೇ ಇಲ್ಲ ಎಂದು ವಾದಿಸಿದ್ದಾರೆ
ಈ ಸುದ್ದಿ ನೀತಿಪಾಠ: ನೀವು ಶಾಸಕರಿದ್ದರೂ ಸಹಿ ಕುಸ್ತಿಪಟುವನ್ನು ಕೆಣಕಬೇಡಿ
ಕುಸ್ತಿಪಟುವಿಗೆ ಪುಕ್ಕಟ್ಟೆ ಸಲಹೆ ನೀಡ ಹೋದ ಲಾಲು ಶಾಸಕನಿಗಾದ ಗತಿ ನೋಡಿ(ವಿಡಿಯೋ)